ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗಾಗಿ ಆಮ್ ಆದ್ಮಿ ಪಕ್ಷ (ಆಪ್) ದೆಹಲಿಯ ಏಳು ಸ್ಥಾನಗಳ ಪೈಕಿ ಆರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಮೂಲಕ ಕಾಂಗ್ರೆಸ್ ಜತೆ ಮೈತ್ರಿ ಇಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಆಪ್ ನೀಡಿದೆ.
ಪೂರ್ವ ದೆಹಲಿ ಕ್ಷೇತ್ರದಿಂದ ಆತಿಶಿ, ವಾಯವ್ಯ ದೆಹಲಿಯಿಂದ ಗುಗ್ಗನ್ ಸಿಂಗ್, ದಕ್ಷಿಣದಿಂದ ರಾಘವ್ ಚಡ್ಡಾ, ಈಶಾನ್ಯದಿಂದ ದಿಲೀಪ್ ಪಾಂಡೆ, ಚಾಂದಿನ ಚೌಕ್ನಿಂದ ಪಂಕಜ್ ಗುಪ್ತಾ ಹಾಗೂ ನವದೆಹಲಿಯಿಂದ ಬ್ರಿಜೇಜ್ ಗೊಯಲ್ ಸ್ಪರ್ಧಿಸಲಿದ್ದಾರೆ. ಪಶ್ಚಿಮ ದೆಹಲಿಗೆ ಶೀಘ್ರ ಅಭ್ಯರ್ಥಿ ಹೆಸರನ್ನು ಪ್ರಕಟಿಸಲಾಗುವುದು ಎಂದು ಆಪ್ ಸಂಚಾಲಕ ಗೋಪಾಲ್ ರಾಯ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.