ADVERTISEMENT

ಧೂತ್ ಸಹೋದರರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 17:35 IST
Last Updated 21 ಫೆಬ್ರುವರಿ 2011, 17:35 IST

ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ವಿಡಿಯೊಕಾನ್ ಗುಂಪಿನ ಅಧ್ಯಕ್ಷ ವೇಣುಗೋಪಾಲ್ ಧೂತ್ ಹಾಗೂ ಅವರ ಸಹೋದರ ರಾಜ್ಯಸಭಾ ಸದಸ್ಯ ರಾಜಕುಮಾರ್ ಧೂತ್ ಅವರನ್ನು ಸಿಬಿಐ ಸೋಮವಾರ ಪ್ರಶ್ನಿಸಿತು.

ಮಧ್ಯಾಹ್ನ ಇಬ್ಬರನ್ನೂ ಇಲ್ಲಿನ ಸಿಬಿಐ ಕಚೇರಿಗೆ ಕರೆಸಿಕೊಳ್ಳಲಾಗಿತ್ತು. ಕನಿಷ್ಠ ಏಳು ಗಂಟೆಗಳ ಕಾಲ ಹಗರಣಕ್ಕೆ ಸಂಬಂಧಿಸಿದಂತೆ ಸುದೀರ್ಘವಾಗಿ ಪ್ರಶ್ನಿಸಲಾಯಿತು ಎಂದು ಮೂಲಗಳು ತಿಳಿಸಿವೆ. ತಮ್ಮ ಕಂಪೆನಿಯ ಷೇರು ಬಂಡವಾಳವನ್ನು ಏಕಾಏಕಿ ಒಂದು ಲಕ್ಷ ರೂ.ನಿಂದ 150 ಕೋಟಿ ರೂ.ಗೆ ಪರಿವರ್ತಿಸಿದ ಬಗ್ಗೆ ಅಧಿಕಾರಿಗಳು ಇವರಿಂದ ವಿವರಣೆ ಪಡೆದರು ಎನ್ನಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.