ಕೊಡಂಬಕ್ಕಂ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸುತ್ತಾರೆಯೇ? ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ರಜನಿಕಾಂತ್ ಅವರಲ್ಲಿ ಕೇಳಿದಾಗ, ನೀವು ನಮ್ಮ ಮನೆಗೆ ಹೋಗಿ, ನಿಮ್ಮ ಕೆಲಸ ಮಾಡಿ. ಯಾವಾಗ ಯುದ್ಧ ಮಾಡುವ ಪರಿಸ್ಥಿತಿ ಬರುತ್ತದೋ ಆವಾಗ ನೋಡಿಕೊಳ್ಳೋಣ ಎಂದು ಹೇಳುವ ಮೂಲಕ ಅವರು ರಾಜಕೀಯ ಪ್ರವೇಶದ ಊಹಾಪೋಹಗಳನ್ನು ಮತ್ತೆ ಜೀವಂತವಾಗಿರಿಸಿದ್ದಾರೆ.
ತಮಿಳುನಾಡಿನಾದ್ಯಂತವಿರುವ ಅಭಿಮಾನಿಗಳನ್ನು ಭೇಟಿ ಮಾಡುವ ಉದ್ದೇಶದಿಂದ 5 ದಿನಗಳ ಕಾಲ ಅಭಿಮಾನಿಗಳೊಂದಿಗಿನ ಸಂವಾದ ಕಾರ್ಯಕ್ರಮ ನಡೆಸಿದ ರಜನಿ, ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕಿದೆ ಎಂದು ಹೇಳಿದ್ದಾರೆ.
ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ ಸ್ಟಾಲಿನ್, ಪಿಎಂಕೆ ಯುವ ಘಟಕ ನೇತಾರ ಅನ್ಬುಮಣಿ ರಾಮದಾಸ್, ವಿಸಿಕೆ ಮುಖ್ಯಸ್ಥ ತಿರುಮವಲವನ್ ಮತ್ತು ನಾಮ್ ತಮಿಳರ್ ಕಟ್ಚಿ ನೇತಾರ ಸೀಮಾನ್ ಮೊದಲಾದ ಉತ್ತಮ ನಾಯಕರು ತಮಿಳುನಾಡನ್ನು ಮುನ್ನಡೆಸಬಲ್ಲವರಾಗಿದ್ದಾರೆ. ಆದರೆ ನಮ್ಮ ರಾಜಕೀಯ ವ್ಯವಸ್ಥೆಯೇ ಹಾಳಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.