ಕೊಲ್ಕತ್ತ: ಕೋಮು ಪ್ರಚೋದನೆ ನೀಡುವ ನಕಲಿ ವಿಡಿಯೊವನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ ಆರೋಪದಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ಕಾರ್ಯದರ್ಶಿ ತರುಣ್ ಸೇನ್ಗುಪ್ತಾ ಅವರನ್ನು ಅಲ್ಲಿನ ಸಿಐಡಿ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ಬಂಧಿತರು ಅಸನ್ಸಲ್–ದುರ್ಗಾಪುರ ಕಮಿಷನರೇಟ್ನ ಹಿರಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಕೋಮು ಪ್ರಚೋದನೆ ನೀಡುವಂಥ ವಿಡಿಯೊವನ್ನು ಕೆಲವು ವಾರಗಳ ಹಿಂದೆಯೇ ತರುಣ್ ಸೇನ್ಗುಪ್ತಾ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದರು. ‘ನಾರ್ತ್ 24 ಪರಗಣ’ ಜಿಲ್ಲೆಯ ಬಷಿರತ್ನ ಬದುರಿಯಾದಲ್ಲಿ ಇತ್ತೀಚೆಗೆ ಸಂಭವಿಸಿದ ಕೋಮು ಗಲಭೆ ವೇಳೆ ಅನೇಕರು ಆ ವಿಡಿಯೊವನ್ನು ಶೇರ್ ಮಾಡಿದ್ದರು. ಇದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.