ಭುವನೇಶ್ವರ: ಒಡಿಶಾದ ನ್ಯಾಮಗಿರಿ ಬೆಟ್ಟದಲ್ಲಿ ಲಂಡನ್ ಮೂಲದ ವೇದಾಂತ ಕಂಪೆನಿಯು ನಡೆಸಲು ಉದ್ದೇಶಿಸಿರುವ ಬಾಕ್ಸೈಟ್್ ಗಣಿಗಾರಿಕೆಗೆ ಅನುಮತಿ ನೀಡಲು ಕೇಂದ್ರ ಪರಿಸರ ಸಚಿವಾಲಯ ನಿರಾಕರಿಸಿದೆ.
ನ್ಯಾಮಗಿರಿ ಬೆಟ್ಟವು ಬುಡಕಟ್ಟು ಪ್ರಾಬಲ್ಯದ ಕಾಳಹಂಡಿ ಹಾಗೂ ರಾಯಗಡ ಜಿಲ್ಲೆಗಳ ನಡುವೆ ಮೈಚಾಚಿಕೊಂಡಿದೆ.
‘ಆದರೆ ಈ ಬೆಳವಣಿಗೆ ಅನಿರೀಕ್ಷಿತವೇನೂ ಆಗಿರಲಿಲ್ಲ. ಈ ಎರಡೂ ಜಿಲ್ಲೆಗಳಲ್ಲಿ ಈ ಗಣಿಗಾರಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು’ ಎಂದು ರಾಜ್ಯ ಉಕ್ಕು ಮತ್ತು ಗಣಿ ಖಾತೆ ಸಚಿವ ಆರ್.ಕೆ.ಸಿಂಗ್ ಹೇಳಿದ್ದಾರೆ.
ಸ್ವಾಗತ: ಪರಿಸರ ಸಚಿವಾಲಯದ ನಿರ್ಧಾರವನ್ನು ರಾಜ್ಯ ಕಾಂಗ್ರೆಸ್ ಘಟಕ ಸ್ವಾಗತಿಸಿದೆ. ಆದರೆ ಆಡಳಿತಾರೂಢ ಬಿಜೆಡಿ ಮಾತ್ರ ಅಸಮಾಧಾನಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.