ADVERTISEMENT

ಬಿಜೆಪಿ ದ್ವಿಮುಖ ನೀತಿ ಬಯಲಿಗೆ: ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ನವದೆಹಲಿ (ಐಎಎನ್‌ಎಸ್‌): ಮೋದಿ ಭ್ರಷ್ಟರಲ್ಲ ಎಂದು ವಿಕಿಲೀಕ್‌್ಸ  ಹೇಳಿರುವು­ದನ್ನೇ ದೊಡ್ಡದಾಗಿ ಪ್ರಚಾರ ಮಾಡುತ್ತಿ­ರುವ ಬಿಜೆಪಿಯ ದ್ವಿಮುಖ ನೀತಿಯನ್ನು ಬಯಲಿಗೆ ಎಳೆಯಬೇಕಾತ್ತದೆ ಎಂದು ಕಾಂಗ್ರೆಸ್‌ ಎಚ್ಚರಿಕೆ ನೀಡಿದೆ.

‘ಭ್ರಷ್ಟರನ್ನು ಪಕ್ಷಕ್ಕೆ ಸೇರಿಸಿಕೊಂಡು ಉನ್ನತ ಹುದ್ದೆ ನೀಡಿ ಚುನಾವಣೆ ಟಿಕೆಟ್‌ ನೀಡುತ್ತಿರುವ ಬಿಜೆಪಿ ಮುಖಂಡರು ತಾವು ಬಹಳ ಪ್ರಾಮಾಣಿಕರು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದು ಕಾಂಗ್ರೆಸ್‌ ವಕ್ತಾರ ಆನಂದ್‌ ಶರ್ಮಾ ಮಂಗಳವಾರ ಇಲ್ಲಿ ನಡೆಸಿದ ಪತ್ರಿಕಾ­ಗೋಷ್ಠಿ­ಯಲ್ಲಿ ಆರೋಪಿಸಿದ್ದಾರೆ.

‘ವಿಕಿಲೀಕ್‌್ಸ ಹೇಳಿರುವುದನ್ನೇ ದೊಡ್ಡ ಪ್ರಶಸ್ತಿ ಎಂಬಂತೆ ಬಿಜೆಪಿ ಕಾರ್ಯ­ಕರ್ತರು ಪ್ರಚಾರ ಮಾಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.