ADVERTISEMENT

ಬುದ್ಧಗಯಾ: ಎನ್‌ಐಎಗೆ ಸಿಗದ ಮಹತ್ವದ ಸುಳಿವು

​ಪ್ರಜಾವಾಣಿ ವಾರ್ತೆ
Published 12 ಜುಲೈ 2013, 10:07 IST
Last Updated 12 ಜುಲೈ 2013, 10:07 IST

ಪಟ್ನಾ(ಐಎಎನ್‌ಎಸ್): ಬಿಹಾರದ ಬುದ್ಧಗಯಾದ ಮಹಾ ಭೋದಿ ಮಂದಿರ ಆವರಣದಲ್ಲಿ  ಸರಣಿ ಬಾಂಬ್ ಸ್ಫೊಟ ಸಂಭವಿಸಿ ಐದು ದಿನ ಕಳೆದರೂ ದುಷ್ಕರ್ಮಿಗಳ ಜಾಡು ಹಿಡಿಯುವಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಈವರೆಗೆ ಯಾವುದೇ ಮಹತ್ವದ ಬೆಳವಣಿಗೆ ಸಾಧಿಸಿಲ್ಲ.

ತನಿಖೆಯಲ್ಲಿ ನಿರತವಾಗಿರುವ ಎನ್‌ಐಎ, ಸ್ಫೋಟಕ್ಕೆ ಸಂಬಂಧಿಸಿದ 18 ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗಾಗಿ ಹೈದರಾಬಾದ್‌ಗೆ ಶುಕ್ರವಾರ ಕಳುಹಿಸಿಕೊಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುದ್ಧಗಯಾ ಮಂದಿರದ ಆಂತರಿಕ ಭದ್ರತೆ ಜವಾಬ್ದಾರಿಯನ್ನು ಹೊತ್ತಿದ್ದ ಮಂದಿರದ ಆಡಳಿತ ಮಂಡಳಿಯ ಖಾಸಗಿ ಭದ್ರತಾ ಸಿಬ್ಬಂದಿಯ ವಿಚಾರಣೆಯಲ್ಲಿ ಎನ್‌ಎಐ ನಿರತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.