ADVERTISEMENT

ಸಿನ್ಹಾಗೆ ಮಮತಾ, ಕೇಜ್ರಿವಾಲ್‌ ಬೆಂಬಲ

ಪಿಟಿಐ
Published 5 ಡಿಸೆಂಬರ್ 2017, 19:30 IST
Last Updated 5 ಡಿಸೆಂಬರ್ 2017, 19:30 IST
ಸಿನ್ಹಾಗೆ ಮಮತಾ, ಕೇಜ್ರಿವಾಲ್‌ ಬೆಂಬಲ
ಸಿನ್ಹಾಗೆ ಮಮತಾ, ಕೇಜ್ರಿವಾಲ್‌ ಬೆಂಬಲ   

ಮುಂಬೈ: ವಿದರ್ಭ ಪ್ರಾಂತ್ಯದ ರೈತರ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಉದಾಸೀನ ಧೋರಣೆ ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರಿಂದ ಬಂಧನಕ್ಕೊಳಗಾದ ಬಿಜೆಪಿಯ ಹಿರಿಯ ಮುಖಂಡ ಯಶವಂತ ಸಿನ್ಹಾ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ‘ಪೊಲೀಸರು ನಮ್ಮನ್ನು ಬಿಡುಗಡೆ ಮಾಡಿದ್ದರೂ ರೈತರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸುವವರೆಗೆ ಇಲ್ಲಿಂದ ಕದಲುವುದಿಲ್ಲ’ ಎಂದು ಸಿನ್ಹಾ ಅವರು ಅಕೋಲಾ ಜಿಲ್ಲಾ ಪೊಲೀಸ್‌ ಪ್ರಧಾನ ಕಚೇರಿಯ ಮೈದಾನದಲ್ಲಿ ಹೇಳಿದ್ದಾರೆ.

ಪೂರ್ಣ ಬೆಂಬಲ: ‘ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಅವರು ಜೈಲಿನಲ್ಲಿರುವುದರಿಂದ ಆತಂಕವಾಗಿದೆ. ಅವರ ಭೇಟಿಗೆ ಸಂಸದ ದಿನೇಶ್‌ ತ್ರಿವೇದಿ ಅವರನ್ನು ಕಳುಹಿಸುತ್ತಿದ್ದೇನೆ. ರೈತರ ಪರವಾಗಿ ಹೋರಾಟ ನಡೆಸುತ್ತಿರುವ ಸಿನ್ಹಾ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ’ ಎಂದು ಮಮತಾ ಬ್ಯಾನರ್ಜಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಯಶವಂತ ಸಿನ್ಹಾ ಅವರನ್ನು ಬಂಧಿಸಿದ್ದೇಕೆ? ಇದು ತಿಳಿಗೇಡಿತನ. ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು’ ಅರವಿಂದ ಕೇಜ್ರಿವಾಲ್‌ ಅವರು ಟ್ವಿಟರ್‌ನಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.