ADVERTISEMENT

ರೈಲು ನಿಲ್ಲಿಸಲು ಕೈತೋರಿ ಪ್ರಾಣ ಕಳೆದುಕೊಂಡರು !

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2018, 16:49 IST
Last Updated 2 ಡಿಸೆಂಬರ್ 2018, 16:49 IST

ಲಖನೌ: ರಾಕೇಶ್‌ ಸೈನಿಗೆ (25) ರೈಲಿಗೆ ಹೋಗಬೇಕಿತ್ತು. ಆಗಲೇ ತಡವಾಗಿತ್ತು. ಗೆಳೆಯನೊಬ್ಬನ ಜತೆಗೆ ಮತ್ತೊಬ್ಬ ಗೆಳೆಯನಆಟೊದಲ್ಲಿ ರೈಲು ನಿಲ್ದಾಣದತ್ತ ಹೊರಟರು.ಇಬ್ಬರೂ ಕಂಠಮಟ್ಟ ಕುಡಿದಿದ್ದರು.

ನಿಲ್ದಾಣದ ಸಮೀಪದ ಕ್ರಾಸಿಂಗ್‌ನಲ್ಲಿ ರೈಲು ಬರುವುದಕ್ಕಾಗಿ ಗೇಟ್‌ ಹಾಕಲಾಗಿತ್ತು. ಆಟೊದಲ್ಲಿ ಮುಂದಕ್ಕೆ ಹೋಗಲು ಸಾಧ್ಯವಿರಲಿಲ್ಲ. ಹಾಗಾಗಿ ಇಬ್ಬರು ಗೆಳೆಯರು ಆಟೊದಿಂದ ಇಳಿದು ನಡೆದೇ ನಿಲ್ದಾಣದತ್ತ ಹೋಗಲು ನಿರ್ಧರಿಸಿ ಹೆಜ್ಜೆ ಹಾಕತೊಡಗಿದರು.

ಹಳಿ ಪಕ್ಕದಲ್ಲಿ ನಡೆದು ಹೋಗುತ್ತಿದ್ದವರಿಗೆ ರೈಲು ಬರುತ್ತಿರುವುದು ಕಾಣಿಸಿತು. ಹಾಗಾಗಿ ಅವರು ರೈಲು ನಿಲ್ದಾಣಕ್ಕೆ ಹೋಗುವ ಯೋಚನೆ ಕೈಬಿಟ್ಟರು. ಹಳಿಯ ಮಧ್ಯೆ ನಿಂತು ರೈಲು ನಿಲ್ಲಿಸುವಂತೆ ಕೈತೋರಿದರು. ರೈಲಿನಡಿಗೆ ಸಿಲುಕಿ ಮೃತಪಟ್ಟರು.

ADVERTISEMENT

ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.