ADVERTISEMENT

ಇಂಡಿಯಾದಲ್ಲಿ (INDIA) ‘ಐ‘ (I) ಅಕ್ಷರ ತೆಗೆದರೆ ಉಳಿಯುವುದು ಎನ್‌ಡಿಎ (NDA) ಮಾತ್ರ: ನಟ ಸಿದ್ದಾರ್ಥ್

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 14:06 IST
Last Updated 1 ಜನವರಿ 2018, 14:06 IST
ಇಂಡಿಯಾದಲ್ಲಿ (INDIA) ‘ಐ‘ (I) ಅಕ್ಷರ ತೆಗೆದರೆ ಉಳಿಯುವುದು ಎನ್‌ಡಿಎ (NDA) ಮಾತ್ರ: ನಟ ಸಿದ್ದಾರ್ಥ್
ಇಂಡಿಯಾದಲ್ಲಿ (INDIA) ‘ಐ‘ (I) ಅಕ್ಷರ ತೆಗೆದರೆ ಉಳಿಯುವುದು ಎನ್‌ಡಿಎ (NDA) ಮಾತ್ರ: ನಟ ಸಿದ್ದಾರ್ಥ್   

ಚೆನ್ನೈ: ಪದ್ಮಾವತಿ ಚಿತ್ರದ ಹೆಸರು ಬದಲಾವಣೆ ಮತ್ತು ಮಾರ್ಪಾಡುಗಳಿಗೆ ಸಂಬಂಧಿಸಿದಂತೆ ನಟ ಸಿದ್ದಾರ್ಥ್ ಅಸಮಾಧಾನ ವ್ಯಕ್ತಪಡಿಸಿದ್ದು ಇಂಡಿಯಾದಲ್ಲಿ ‘ಐ’ ತೆಗೆದರೆ ಉಳಿಯುವುದು ಎನ್‌ಡಿಎ ಮಾತ್ರ ಎಂದು ಟ್ವೀಟ್‌ ಮಾಡಿದ್ದಾರೆ.

ದೇಶದಾದ್ಯಂತ ಪರ–ವಿರೋಧ ಚರ್ಚೆ ಹುಟ್ಟುಹಾಕಿದ್ದ, ಸಂಜಯ್‌ ಲೀಲಾ ಬನ್ಸಾಲಿ ಅವರ ‘ಪದ್ಮಾವತಿ’ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ– ಸೆನ್ಸಾರ್‌ ಮಂಡಳಿ) ಹೆಸರನ್ನು ಬದಲಾಯಿಸುವಂತೆ ಸೂಚನೆ ನೀಡಿರುವುದು ಚಿತ್ರರಂಗದವರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ದಕ್ಷಿಣ ಭಾರತದ ಖ್ಯಾತ ನಟ ಸಿದ್ದಾರ್ಥ್, ಇಂಡಿಯಾದಲ್ಲಿ (INDIA) ‘ಐ‘ (I) ಅಕ್ಷರವನ್ನು ತೆಗೆದರೆ ದೇಶದಲ್ಲಿ ಉಳಿಯುವುದು ಎನ್‌ಡಿಯ (NDA) ಮಾತ್ರ, ಇದೇ ರೀತಿ ಸೆನ್ಸಾರ್ ಮುಂದುವರೆಸಿ ಎಂದು ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸಿದ್ಧಾರ್ಥ್ ಈ ಟ್ವೀಟ್ ಪೋಸ್ಟ್‌ ಮಾಡಿದ್ದಾರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.