ಮುಂಬೈ: ಆಡಿಟ್ ಬ್ಯೂರೊ ಆಫ್ ಸರ್ಕ್ಯುಲೇಶನ್ಗೆ (ಎಬಿಸಿ) 2019–20ನೇ ಸಾಲಿನ ಅಧ್ಯಕ್ಷರಾಗಿ ಮಧುಕರ್ ಕಾಮತ್ (ಜಾಹೀರಾತು ಸಂಸ್ಥೆಗಳ ಪ್ರತಿನಿಧಿ) ಹಾಗೂ ಉಪಾಧ್ಯಕ್ಷರಾಗಿ ದೇವೇಂದ್ರ ವಿ. ದರ್ದ (ಪ್ರಕಾಶಕರ ಪ್ರತಿನಿಧಿ) ಅವರು ಆಯ್ಕೆಯಾಗಿದ್ದಾರೆ. ಕಾಮತ್ ಅವರು ಡಿಡಿಬಿ ಮುದ್ರಾ ಪ್ರೈ.ಲಿ. ಸಂಸ್ಥೆಯ ಪ್ರತಿನಿಧಿಯಾಗಿದ್ದರೆ, ದರ್ದ ಅವರು ಲೋಕಮತ್ ಮೀಡಿಯಾ ಪ್ರೈ.ಲಿ. ಸಂಸ್ಥೆಯ ಪ್ರತಿನಿಧಿಯಾಗಿದ್ದಾರೆ.
ಜಾಹೀರಾತು ಕ್ಷೇತ್ರದಲ್ಲಿ ನಾಲ್ಕು ದಶಕಗಳ ಕಾಲ ದುಡಿದ ಅನುಭವ ಹೊಂದಿರುವ ಕಾಮತ್ ಅವರು ಭಾರತೀಯ ಜಾಹೀರಾತು ಸಂಸ್ಥೆಗಳ ಸಂಘ (ಎಎಎಐ) ಹಾಗೂ ದಿ ಅಡ್ವರ್ಟೈಸಿಂಗ್ ಸ್ಟಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾದ (ಎಎಸ್ಸಿಐ) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸಕ್ತ ಅವರು ಡಿಡಿಬಿ ಮುದ್ರಾ ಗ್ರೂಪ್ನ ಗೌರವಾಧ್ಯಕ್ಷ ಹಾಗೂ ಇಂಟರ್ ಬ್ರಾಂಡ್ ಇಂಡಿಯಾದ ಮಾರ್ಗದರ್ಶಿಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.