ADVERTISEMENT

ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಔರಂಗಾಬಾದ್ ಹೆಸರು ಬದಲು: ಘೋಷಣೆ

ಪಿಟಿಐ
Published 4 ಜನವರಿ 2021, 14:05 IST
Last Updated 4 ಜನವರಿ 2021, 14:05 IST
ಚಂದ್ರಕಾಂತ್ ಪಾಟೀಲ್
ಚಂದ್ರಕಾಂತ್ ಪಾಟೀಲ್   

ಪುಣೆ: ‘ಔರಂಗಾಬಾದ್‌ ಅನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡುವುದಕ್ಕೆ ಎಲ್ಲರ ಒಪ್ಪಿಗೆಯೂ ಇದ್ದು, ಇಲ್ಲಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಿದರೆ ಈ ಕುರಿತ ನಿರ್ಣಯವನ್ನು ಅಂಗೀಕರಿಸಲಾಗುವುದು’ ಎಂದು ಮಹಾರಾಷ್ಟ್ರ ಬಿಜೆಪಿ ಮುಖಂಡ ಚಂದ್ರಕಾಂತ್ ಪಾಟೀಲ್ ಸೋಮವಾರ ಆಶ್ವಾಸನೆ ನೀಡಿದರು.

ಹೆಸರು ಬದಲಾವಣೆಯನ್ನು ಕಾಂಗ್ರೆಸ್ ಸತತವಾಗಿ ವಿರೋಧಿಸುತ್ತಲೇ ಬಂದಿದೆ. ಔರಂಗಾಬಾದ್‌ನ ಮರುನಾಮಕರಣಕ್ಕೆ ಮೊದಲಿನಿಂದಲೂ ಒತ್ತಾಯಿಸುತ್ತಿದ್ದ ಶಿವಸೇನಾ ಸರ್ಕಾರವನ್ನು ನಡೆಸುವ ಸಲುವಾಗಿ ಕಾಂಗ್ರೆಸ್ ಜೊತೆಗೆ ಮೈತ್ರಿ ಬೆಳೆಸಿದೆ ಎಂದು ಕುಟುಕಿದರು.

ಎರಡು ದಶಕಗಳ ಹಿಂದೆಯೇ ಔರಂಗಾಬಾದ್‌ ಅನ್ನು ಸಂಭಾಜಿನಗರವೆಂದು ಮರುನಾಮಕರಣ ಮಾಡುವ ಬೇಡಿಕೆಯನ್ನು ಶಿವಸೇನಾ ಇರಿಸಿತ್ತು. ಈ ಸಂಬಂಧ, 1995ರಲ್ಲಿ ಔರಂಗಾಬಾದ್ ನಗರಪಾಲಿಕೆಯು ನಿರ್ಣಯವನ್ನು ಕೈಗೊಂಡಿತ್ತು. ಈ ನಿರ್ಣಯವನ್ನು ಕಾಂಗ್ರೆಸ್‌ ಸದಸ್ಯ ಹೈಕೋರ್ಟ್, ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.