ADVERTISEMENT

ರಾಮಚರಿತಮಾನಸ ಪ್ರಕರಣ: ಎಸ್‌ಪಿ ನಾಯಕ ಮೌರ್ಯ ವಿರುದ್ಧ ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 13:38 IST
Last Updated 30 ಜನವರಿ 2023, 13:38 IST
   

ಲಖನೌ: ರಾಮಚರಿತಮಾನಸದ ಕೆಲವು ಪುಟಗಳನ್ನು ಗುಂಪೊಂದು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್‌ ಮೌರ್ಯ ಸೇರಿ ಇತರ 10 ಜನರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ವೃಂದಾವನ ಯೋಜನಾ ಸೆಕ್ಟರ್‌ನಲ್ಲಿ ಅಖಿಲ ಭಾರತೀಯ ಒಬಿಸಿ ಮಹಾಸಭಾ ಭಾನುವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ, ಮಹಿಳೆ ಮತ್ತು ದಲಿತ ಸಮುದಾಯದ ವಿರುದ್ಧ ಹೇಳಿಕೆ ಇರುವ ರಾಮಚರಿತಮಾನಸದ ಕೆಲ ಪುಟಗಳ ಜೆರಾಕ್ಸ್‌ ಪ್ರತಿಗಳನ್ನು ಮಾತ್ರ ಸುಡಲಾಗಿದೆ ಎಂದು ಸಮುದಾಯ ತಿಳಿಸಿದೆ.

ಸತ್ನಮ್‌ ಸಿಂಗ್ ಲವಿ ಎಂಬುವವರು ಪಿಜಿಐ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.