ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ 4.3ರಷ್ಟು ತೀವ್ರತೆ ಭೂಕಂಪ ಉಂಟಾಗಿದ್ದು, ಯಾವುದೇ ಹಾನಿಯಾದ ಬಗೆಗೆ ವರದಿಗಳು ಬಂದಿಲ್ಲ.
ಇದೊಂದು ಸಣ್ಣ ಪ್ರಮಾಣದ ಭೂಕಂಪ ಎಂಬುದನ್ನು ಖಚಿತಪಡಿಸಿರುವ ಹವಾಮಾನ ಇಲಾಖೆಯು ತಕ್ಷಣಕ್ಕೆ ಯಾವುದೇ ಹಾನಿಯಾಗದ ಬಗೆಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬುಧವಾರ ಬೆಳಗ್ಗೆ 2.17ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಇಲ್ಲಿನ ದಿಗ್ಲಿಪುರ್ದಲ್ಲಿ ಭೂಕಂಪ ಕೇಂದ್ರ ಬಿಂದುವಿತ್ತು ಎಂದು ರಾಷ್ಟ್ರೀಯ ಭೂಕಂಪನ ಸಂಸ್ಥೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.