ADVERTISEMENT

ಬಡ್ತಿ ನಿರಾಕರಿಸುವ ನೌಕರರು ಆರ್ಥಿಕ ಸೌಲಭ್ಯಕ್ಕೆ ಅರ್ಹರು: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 19:30 IST
Last Updated 3 ಜನವರಿ 2022, 19:30 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ನಿಯಮಿತ ಬಡ್ತಿಯನ್ನು ನಿರಾಕರಿಸಿದ ನೌಕರರು ಕೇಂದ್ರದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ 1999ರ ಆಗಸ್ಟ್‌ನಲ್ಲಿ ಹೊರಡಿಸಿದ ಕಚೇರಿ ಮೆಮೊ ಅಡಿಯಲ್ಲಿ ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುತ್ತಾರೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಕೇಂದ್ರದ ಅಶ್ಯೂರ್ಡ್‌ ಕೆರಿಯರ್‌ ಪ್ರೋಗ್ರೇಷನ್‌ ಸ್ಕೀಮ್‌ನ ಪ್ರಯೋಜನ ಒದಗಿಸುವಂತೆ ಉದ್ಯೋಗಿಗಳು ಸಲ್ಲಿಸಿದ್ದ ಕ್ಲೇಮುಗಳ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ಈ ರೀತಿ ಹೇಳಿದೆ.

12 ವರ್ಷಗಳ ಸೇವೆಯ ನಂತರ ಬಡ್ತಿ ಪಡೆಯಲು ಸಾಧ್ಯವಾಗದ ಉದ್ಯೋಗಿಗಳಿಗೆ ಮುಂದಿನ ಉನ್ನತ ಶ್ರೇಣಿಯ ವೇತನಕ್ಕಾಗಿ ಒದಗಿಸಲಾದ ಅಶ್ಯೂರ್ಡ್‌ ಕೆರಿಯರ್‌ ಪ್ರೋಗ್ರೇಷನ್‌ ಸ್ಕೀಮ್‌, ಎರಡನೇ ಉನ್ನತೀಕರಣದ ಪ್ರಯೋಜನ ಪಡೆಯಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಆರ್‌.ಎಸ್.ರೆಡ್ಡಿ, ಹೃಷಿಕೇಶ್ ಪೀಠ ಹೇಳಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.