ತಿರುಪತಿ: ಹೈದರಾಬಾದ್ನ ಭಕ್ತರೊಬ್ಬರು ತಿರುಮಲದ ವೆಂಕಟೇಶ್ವರ ದೇವಾಲಯದಲ್ಲಿ ಐದು ಕಿಲೋ ಗ್ರಾಂ ತೂಕದ ಖಡ್ಗವನ್ನು ಸೋಮವಾರ ಅರ್ಪಿಸಿದ್ದಾರೆ.
ಈ ಭಕ್ತರು ಉದ್ಯಮಿಯಾಗಿದ್ದು, ದೇವರಿಗೆ ಪೂಜೆ ಸಲ್ಲಿಸಿ ‘ಸೂರ್ಯಕಟಾರಿ’ ಎನ್ನುವ ಖಡ್ಗವನ್ನು ಅರ್ಪಿಸಿದ್ದಾರೆ. ಈ ಖಡ್ಗವನ್ನು ಎರಡು ಕಿಲೋ ಗ್ರಾಂ ಚಿನ್ನ ಮತ್ತು ಮೂರು ಕಿಲೋ ಗ್ರಾಂ ಬೆಳ್ಳಿಯಿಂದ ತಯಾರಿಸಲಾಗಿದ್ದು, ಒಂದು ಕೋಟಿ ಮೌಲ್ಯದ್ದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಿರುಮಲ–ತಿರುಪತಿ ದೇವಸ್ಥಾನದ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ. ವೆಂಕಟ ಧರ್ಮ ರೆಡ್ಡಿ ಈ ಖಡ್ಗವನ್ನು ಸ್ವೀಕರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.