ADVERTISEMENT

ದಾರಿ ತಪ್ಪಿದ ಚೀನಿಯರಿಗೆ ಅನ್ನ ನೀಡಿದ ಭಾರತ ಸೇನೆ

ಪಿಟಿಐ
Published 5 ಸೆಪ್ಟೆಂಬರ್ 2020, 20:12 IST
Last Updated 5 ಸೆಪ್ಟೆಂಬರ್ 2020, 20:12 IST
ಉತ್ತರ ಸಿಕ್ಕಿಂನಲ್ಲಿ ಸಂಕಷ್ಟ ಸ್ಥಿತಿಯಲ್ಲಿದ್ದ ಚೀನಾ ಪ್ರಜೆಗಳಿಗೆ ಭಾರತೀಯ ಸೇನೆ ಅಗತ್ಯ ನೆರವು ನೀಡಿದೆ.
ಉತ್ತರ ಸಿಕ್ಕಿಂನಲ್ಲಿ ಸಂಕಷ್ಟ ಸ್ಥಿತಿಯಲ್ಲಿದ್ದ ಚೀನಾ ಪ್ರಜೆಗಳಿಗೆ ಭಾರತೀಯ ಸೇನೆ ಅಗತ್ಯ ನೆರವು ನೀಡಿದೆ.   

ನವದೆಹಲಿ:ಪೂರ್ವ ಲಡಾಖ್ ಗಡಿಯಲ್ಲಿ‌ ಚೀನಾ ಸೇನೆ ಆಕ್ರಮಣಕಾರಿ ನಡವಳಿಕೆ ತೋರುತ್ತಿರುವಾಗಲೇ ಭಾರತೀಯ ಸೇನೆಯುಚೀನಾ ಪ್ರಜೆಗಳಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ.

ಉತ್ತರ ಸಿಕ್ಕಿಂ ಗಡಿ ಭಾಗದಲ್ಲಿ ಸಮುದ್ರ ಮಟ್ಟಕ್ಕಿಂತ 17,500 ಅಡಿ ಎತ್ತರದಲ್ಲಿ ದಾರಿ ತಪ್ಪಿದ ಮೂವರು ಚೀನಾ ಪ್ರಜೆಗಳಿಗೆಭಾರತೀಯ ಸೈನಿಕರು ಆಹಾರ, ಬೆಚ್ಚನೆಯ ಉಡುಪು ಮತ್ತು ವೈದ್ಯಕೀಯ ನೆರವು ನೀಡಿದ್ದಾರೆ.

‘ಶೂನ್ಯಕ್ಕಿಂತಲೂ ಕಡಿಮೆ ತಾಪಮಾನವಿರುವ ಪ್ರದೇಶದಲ್ಲಿಮಹಿಳೆ ಸೇರಿದಂತೆ ಮೂವರು ಚೀನಾ ಪ್ರಜೆಗಳು ಸಿಲುಕಿದ್ದರು. ಅಲ್ಲಿಗೆ ತೆರಳಿದ ನಮ್ಮ ಯೋಧರು ಅವರನ್ನು ಸುರಕ್ಷಿತವಾಗಿ ಕಳಿಸಿಕೊಟ್ಟಿದ್ದಾರೆ’ ಎಂದು ಭಾರತೀಯ ಸೇನೆ ಟ್ವೀಟ್‌ ಮಾಡಿದೆ. ‘ಭಾರತೀಯ ಯೋಧರ ಸಹಾಯ ಮತ್ತು ಮಾರ್ಗದರ್ಶನಕ್ಕಾಗಿ ಚೀನಾ ಪ್ರಜೆಗಳು ಕೃತಜ್ಞತೆ ಸಲ್ಲಿಸಿದ್ದಾರೆ’ ಎಂದೂ ಸೇನೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.