ADVERTISEMENT

ಕೇರಳ: ಸರಣಿ ಕೊಲೆ ಆರೋಪಿ ಆತ್ಮಹತ್ಯೆ ಯತ್ನ

ಪಿಟಿಐ
Published 27 ಫೆಬ್ರುವರಿ 2020, 20:04 IST
Last Updated 27 ಫೆಬ್ರುವರಿ 2020, 20:04 IST

ಕೋಯಿಕ್ಕೋಡ್‌ : ಕೇರಳದ ಸರಣಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜೋಲಿ ಜೋಸೆಫ್‌ ಅವರು ಜಿಲ್ಲಾ ಕಾರಾಗೃಹದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಅವರು ಹರಿತವಾದ ಆಯುಧದಿಂದ ಕೈಯ ನರ ಕತ್ತರಿಸಿಕೊಳ್ಳಲು ಯತ್ನಿಸಿದ್ದಾರೆ. ಅವರನ್ನು ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಡ, ಗಂಡನ ಮನೆಯವರು ಮತ್ತು ಇತರ ಮೂವರು ಸಂಬಂಧಿಕರ ಕೊಲೆಯ ಆರೋಪ ಈ ಮಹಿಳೆಯ ಮೇಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT