ADVERTISEMENT

ರಾಜನಾಥ್‌ ಬೆಂಗಾವಲು ಪಡೆ ಸಂಚಾರಕ್ಕೆ ಅಡ್ಡಿ

ಆಧಾರ್‌ ಕಾರ್ಡ್‌ನಲ್ಲಿ ಹೆಸರು ಬದಲಿಗೆ ಒತ್ತಾಯ

ಪಿಟಿಐ
Published 3 ಡಿಸೆಂಬರ್ 2019, 18:11 IST
Last Updated 3 ಡಿಸೆಂಬರ್ 2019, 18:11 IST

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಬೆಂಗಾವಲು ಪಡೆ ಮಂಗಳವಾರ ಸಂಸತ್ ಬಳಿ ಬರುವ ಸಂದರ್ಭದಲ್ಲಿ ರಸ್ತೆಗೆ ಅಡ್ಡಲಾಗಿ 35 ವರ್ಷದ ವ್ಯಕ್ತಿ ಮಲಗಿದ್ದ ಘಟನೆ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವಿಶಂಬರ್ ದಾಸ್ ಗುಪ್ತಾ ಹೆಸರಿನ ವ್ಯಕ್ತಿ, ಆಧಾರ್ ಕಾರ್ಡ್‌ನಲ್ಲಿ ತನ್ನ ಹೆಸರನ್ನು ಬದಲಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಬೇಕೆಂದು ಆಗ್ರಹಿಸಿ ಸಂಸತ್‌ಗೆ ತೆರಳುವ ರಸ್ತೆಯಲ್ಲೇ ಮಲಗಿದ್ದ. ಉತ್ತರ ಪ್ರದೇಶದ ಕುಶಿನಗರ ನಿವಾಸಿಯಾಗಿರುವ ಈತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರಬಹುದೆಂದು’ ಪೊಲೀಸರು ಶಂಕಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ 1.25ರ ಸುಮಾರಿಗೆ ರಾಜನಾಥ್ ಸಿಂಗ್ ಅವರ ಬೆಂಗಾವಲು ಪಡೆಯು ಸಂಸತ್ ರಸ್ತೆಗೆ ಬರುತ್ತಿರುವಾಗ ಈ ಘಟನೆ ನಡೆದಿದ್ದು, ವಿಶಂಬರ್ ದಾಸ್ ಗುಪ್ತನನ್ನು ಸಂಸತ್ ಮಾರ್ಗದ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.