ADVERTISEMENT

ವಸೂಲಿ ಪ್ರಕರಣ: ರಾಜ್ಯ ಸಿಐಡಿ ಮುಂದೆ ಈ ವಾರ ಪರಂವೀರ್‌ ಸಿಂಗ್ ಹಾಜರು ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 13:07 IST
Last Updated 28 ನವೆಂಬರ್ 2021, 13:07 IST
ಪರಂ ವೀರ್‌ಸಿಂಗ್
ಪರಂ ವೀರ್‌ಸಿಂಗ್   

ಮುಂಬೈ: ವಸೂಲಿ ಹಾಗೂ ಅಧಿಕಾರ ದುರುಪಯೋಗ ಆರೋಪಗಳಿಗೆ ಸಂಬಂಧಿಸಿ ಆರು ಪ್ರಕರಣಗಳನ್ನು ಎದುರಿಸುತ್ತಿರುವ ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಂವೀರ್‌ ಸಿಂಗ್‌ ಅವರು ವಿಚಾರಣೆಗಾಗಿ ರಾಜ್ಯ ಸಿಐಡಿ ಮುಂದೆ ಈ ವಾರ ಹಾಜರಾಗುವ ಸಾಧ್ಯತೆ ಇದೆ.

ಪರಂವೀರ್‌ ಸಿಂಗ್‌ ವಿರುದ್ಧ ದಾಖಲಾಗಿರುವ ಮೂರು ಎಫ್‌ಐಆರ್‌ಗಳಿಗೆ ಸಂಬಂಧಿಸಿರಾಜ್ಯ ಸಿಐಡಿ ತನಿಖೆ ನಡೆಸುತ್ತಿದೆ. ನವಿಮುಂಬೈನ ಬೇಲಾಪುರದಲ್ಲಿರುವ ಸಿಐಡಿ ಪ್ರಾದೇಶಿಕ ಕಚೇರಿಯಲ್ಲಿ ಅವರು ವಿಚಾರಣೆಗಾಗಿ ಹಾಜರಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಸಿಐಡಿಯ ಎಸ್‌ಪಿ ಎಂ.ಎನ್‌.ಜಗತಾಪ್‌ ಅವರು ಈ ಮೂರು ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ.

ಕಳೆದ ವಾರ ಅವರು ವಿಚಾರಣೆಗಾಗಿ ಮುಂಬೈ ಪೊಲೀಸ್‌ ಹಾಗೂ ಠಾಣೆ ಪೊಲೀಸರ ಮುಂದೆ ಹಾಜರಾಗಿದ್ದರು. ತಮ್ಮ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಅವರು ವಿಚಾರಣೆ ಎದುರಿಸಿದರು. ಈ ಪ್ರಕರಣಗಳಿಗೆ ಸಂಬಂಧಿಸಿ ಅವರಿಗೆ ಸುಪ್ರೀಂಕೋರ್ಟ್‌ ಬಂಧನದಿಂದ ರಕ್ಷಣೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.