ADVERTISEMENT

ಉಪ್ಪಿನ ಸತ್ಯಾಗ್ರಹ ಸ್ಮಾರಕ ಲೋಕಾರ್ಪಣೆ

ಪಿಟಿಐ
Published 30 ಜನವರಿ 2019, 14:12 IST
Last Updated 30 ಜನವರಿ 2019, 14:12 IST

ಮುಂಬೈ: ಗುಜರಾತ್‌ನ ದಂಡಿಯಲ್ಲಿ ಸ್ಥಾಪಿಸಿರುವ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕ ಮತ್ತು ವಸ್ತು ಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ 71ನೇ ವರ್ಷಾಚರಣೆ ನಿಮಿತ್ತ ದೇಶಕ್ಕೆ ಅರ್ಪಣೆ ಮಾಡಿದರು.‌

ಸ್ಮಾರಕವು ಗಾಂಧೀಜಿ ಪ್ರತಿಮೆ ಮತ್ತು 1930ರಲ್ಲಿ ಗಾಂಧೀಜಿ ಅವರ ಜತೆಗೆ ಐತಿಹಾಸಿ ದಂಡಿ ಯಾತ್ರೆಯಲ್ಲಿ ಪಾಲ್ಗೊಂಡ 80 ಸತ್ಯಾಗ್ರಾಹಿಗಳ ಪ್ರತಿಮೆಗಳನ್ನು ಒಳಗೊಂಡಿದೆ. ಐತಿಹಾಸಿಕ ದಂಡಿಯಾತ್ರೆಯ ಕಥೆಗಳು ಮತ್ತು ವಿವಿಧ ಘಟನೆಗಳನ್ನು ವಿವರಿಸುವ 24 ಭಿತ್ತಿಚಿತ್ರಗಳನ್ನು ಇದು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT