ADVERTISEMENT

ಆಧುನಿಕ ಭಾರತ ನಿರ್ಮಾಣಕ್ಕೆ ರಾಜೀವ್ ಗಾಂಧಿ ನೀತಿಗಳು ಕಾರಣ: ರಾಹುಲ್‌ ಗಾಂಧಿ

ಪಿಟಿಐ
Published 20 ಆಗಸ್ಟ್ 2021, 12:27 IST
Last Updated 20 ಆಗಸ್ಟ್ 2021, 12:27 IST
ದೆಹಲಿಯಲ್ಲಿರುವ ರಾಜೀವ್ ಗಾಂಧಿ ಅವರ ಸ್ಮಾರಕ ವೀರಭೂಮಿಗೆ ತೆರಳಿ ರಾಹುಲ್‌ಗಾಂಧಿ ಶುಕ್ರವಾರ ನಮನ ಸಲ್ಲಿಸಿದರು.
ದೆಹಲಿಯಲ್ಲಿರುವ ರಾಜೀವ್ ಗಾಂಧಿ ಅವರ ಸ್ಮಾರಕ ವೀರಭೂಮಿಗೆ ತೆರಳಿ ರಾಹುಲ್‌ಗಾಂಧಿ ಶುಕ್ರವಾರ ನಮನ ಸಲ್ಲಿಸಿದರು.   

ನವದೆಹಲಿ: ಆಧುನಿಕ ಭಾರತ ನಿರ್ಮಾಣಕ್ಕೆ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ದೂರದರ್ಶಿ ಚಿಂತನೆಗಳು, ನೀತಿಗಳೇ ಕಾರಣ ಎಂದು ಅವರ ಪುತ್ರ, ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ ಹೇಳಿದ್ದಾರೆ.

ರಾಜೀವ್ ಗಾಂಧಿ ಅವರ 77ನೇ ಜನ್ಮದಿನ ನಿಮಿತ್ತ ಇಲ್ಲಿನ ಅವರ ಸ್ಮಾರಕ ‘ವೀರ ಭೂಮಿ’ಗೆ ತೆರಳಿ ರಾಹುಲ್ ಪುಷ್ಪಗುಚ್ಛ ಅರ್ಪಿಸಿ‌ದರು.

‘ಅವರೊಬ್ಬ ಅದ್ಭುತ ವ್ಯಕ್ತಿ. ಕರುಣಾಮಯಿ ಮತ್ತು ಪ್ರೀತಿಪಾತ್ರ ವ್ಯಕ್ತಿತ್ವ.ಅವರು ಎಂದಿಗೂ ನನ್ನ ಹೃದಯದಲ್ಲಿ ನೆಲೆಸಿರುತ್ತಾರೆ. ವೀರಭೂಮಿಗೆ ತೆರಳಿ ನಮನ ಸಲ್ಲಿಸಲಾಯಿತು’ ಎಂದು ತಮ್ಮ ಫೇಸ್‌ಬುಕ್‌ ಪುಟದಲ್ಲಿ ರಾಹುಲ್‌ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.