ತಿರುವನಂತಪುರ: ಕೇಂದ್ರದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಅವರಿಗೆ ಮಂಗಳವಾರ ರಾತ್ರಿ ಜೀವ ಬೆದರಿಕೆಯ ಕರೆಯೊಂದು ಬಂದಿದೆ.
ಅಜ್ಞಾತ ವ್ಯಕ್ತಿಯೊಬ್ಬಕೋಯಿಕ್ಕೋಡ್ನ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸಚಿವರಿಗೆ ಬೆದರಿಕೆ ಹಾಕಿದ್ದ. ನಗರ ಪೊಲೀಸ್ ಆಯುಕ್ತರೇ ಆ ಕರೆಯನ್ನು ಸ್ವೀಕರಿಸಿದ್ದರು. ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಕೇಂದ್ರ ಸರ್ಕಾರದ ನೌಕರರೊಬ್ಬರು ಈ ಬೆದರಿಕೆ ಕರೆ ಮಾಡಿರ ಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕರೆ ಮಾಡಲು ಬಳಸಿರುವ ಮೊಬೈಲ್ ಫೋನ್ ತಿರುವನಂತಪುರದ ವ್ಯಕ್ತಿಯೊಬ್ಬರ ಹೆಸರಿನಲ್ಲಿದೆ. ಆದರೆ ಆ ವ್ಯಕ್ತಿಯು, ‘ಬೆದರಿಕೆ ಕರೆಯ ಬಗ್ಗೆ ನನಗೇನೂ ಗೊತ್ತಿಲ್ಲ, ನಾನು ಕರೆ ಮಾಡಿಲ್ಲ’ ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.