ಮಧುರೈ: ಮಧುರೈ ರೈಲ್ವೆ ವಿಭಾಗದಲ್ಲಿ ಒಂದೇ ಹಳಿ ಮೇಲೆ ಎರಡು ರೈಲುಗಳ ಸಂಚಾರಕ್ಕೆ ಅನುಮತಿ ನೀಡಿದ ಸಂಬಂಧ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಮಧುರೈ ವಿಭಾಗದ ಕಲ್ಲಿಕುಡಿ ಹಾಗೂ ತಿರುಮಂಗಲಂ ರೈಲ್ವೆ ಸ್ಟೇಷನ್ ಮಾಸ್ಟರ್ಗಳಾದ ಭೀಮ್ ಸಿಂಗ್ ಮೀನಾ ಮತ್ತು ಜಯಕುಮಾರ್ ಹಾಗೂ ನಿಯಂತ್ರಕ ಮುರುಗನಂದಂ ಅವರನ್ನು ಅಮಾನತು ಮಾಡಲಾಗಿದೆ.
ಗುರುವಾರ ರಾತ್ರಿ 5.30ಕ್ಕೆ ಸೆಂಗೊಟೈನಿಂದ ಬಂದಿದ್ದ ರೈಲು ತಿರುಮಂಗಲಂ ನಿಲ್ದಾಣದಲ್ಲಿ ನಿಂತಿತ್ತು. ಅದೇ ಹಳಿ ಮೇಲೆ ಸೆಂಗೊಟೈ– ಮಧುರೈ ರೈಲು ಬಂದಿತ್ತು. ರೈಲು ಪ್ರಯಾಣಿಕರು ಎಚ್ಚರಿಕೆ ಗಂಟೆ ಬಾರಿಸಿದ್ದರಿಂದ ಎಚ್ಚೆತ್ತ ಚಾಲಕರು ಕೆಲವೇ ಮೀಟರ್ ದೂರದ ಮೊದಲು ರೈಲನ್ನು ನಿಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.