ADVERTISEMENT

ಹಿಮಪಾತ: ಮತ್ತೆ 10 ಮಂದಿಯ ಮೃತದೇಹ ಪತ್ತೆ

ಪಿಟಿಐ
Published 7 ಅಕ್ಟೋಬರ್ 2022, 11:06 IST
Last Updated 7 ಅಕ್ಟೋಬರ್ 2022, 11:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಉತ್ತರಕಾಶಿ: ಇಲ್ಲಿನ ದ್ರೌಪದಿ ಕಾ ದಂಡ ಶಿಖರದಲ್ಲಿ ಈಚೆಗೆ ಹಿಮಪಾತ ಸಂಭವಿಸಿದ ಪರಿಣಾಮ ನಾಪತ್ತೆಯಾಗಿದ್ದವರ ಪೈಕಿ ಮತ್ತೆ 10 ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ ಎಂದು ನೆಹರೂ ಪರ್ವತಾರೋಹಣಸಂಸ್ಥೆ (ಎನ್‌ಐಎಂ) ಶುಕ್ರವಾರ ತಿಳಿಸಿದೆ.

ಭೂಸೇನೆಯ ಎರಡು ಚೀತಾ ಹೆಲಿಕಾಪ್ಟರ್‌ಗಳನ್ನು ಶೋಧ ಕಾರ್ಯಾಚರಣೆಗೆ ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಐಎಂ ಸಂಸ್ಥೆಯ ಪರ್ವತಾರೋಹಿಗಳ ತಂಡ ದ್ರೌಪದಿ ಕಾ ದಂಡ ಶಿಖರ ಏರಿ ಮರಳುತ್ತಿದ್ದಾಗ 17 ಸಾವಿರ ಅಡಿ ಎತ್ತರದಲ್ಲಿ ಹಿಮಪಾತ ಸಂಭವಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.