ಬೆಂಗಳೂರು: ಸೋಮವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಒಳನಾಡಿನಲ್ಲಿ ಮಳೆಯಾಗಿದೆ. ಕರಾವಳಿಯಲ್ಲಿ ಒಣಹವೆ ಮುಂದುವರೆದಿದೆ. ನೆಲಮಂಗಲದಲ್ಲಿ 6 ಸೆ.ಮೀ.ಮಳೆಯಾಗಿದೆ. ರಾಮನಗರ 5, ಚನ್ನಪಟ್ಟಣ 4, ಶ್ರೀನಿವಾಸಪುರ, ಮಾದವಾರ, ಜಿಕೆವಿಕೆ, ಯಲಹಂಕ ಐಎಎಫ್, ಶಿಡ್ಲಘಟ್ಟ, ತೊಂಡೆಭಾವಿ, ಗುಡಿಬಂಡೆಯಲ್ಲಿ ತಲಾ 3, ಗುಂಡ್ಲಪೇಟೆ, ಕೊಳ್ಳೇಗಾಲ, ಚಾಮರಾಜನಗರ, ಮಳವಳ್ಳಿ ಎಆರ್ಜಿ, ಹುಲಿಯೂರುದುರ್ಗ, ಕನಕಪುರ ತಲಾ 2, ಸೇಡಂ, ಶೋರಾಪುರ, ಯಳಂದೂರು, ಕೆಜಿಎಫ್, ಬೆಂಗಳೂರು ನಗರ, ಹೆಚ್ಎಎಲ್ ವಿಮಾನ ನಿಲ್ದಾಣ, ಹೆಸರಘಟ್ಟ, ದೇವನಹಳ್ಳಿ, ಚಿಂತಾಮಣಿ ತಲಾ ಒಂದು ಸೆ.ಮೀ.ಮಳೆಯಾಗಿದೆ.ಗುಲ್ಬರ್ಗದಲ್ಲಿ ಗರಿಷ್ಠ ಉಷ್ಣಾಂಶ 41.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.