ರಾಯಚೂರು: ಕರ್ತವ್ಯಲೋಪ ಸಂಬಂಧ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ್ದ ಅಧಿಕಾರಿ ಹಾಗೂ ಇಬ್ಬರು ಕಾನ್ ಸ್ಟೆಬಲ್ಗಳನ್ನು ಗುರುವಾರ ಅಮಾನತು ಮಾಡಲಾಗಿದೆ.
ರಾಯಚೂರು ಹೊರವಲಯದ ಸಾತ್ ಮೈಲಿ ಚೆಕ್ ಪೋಸ್ಟ್ ಮುಖ್ಯಸ್ಥರಾಗಿದ್ದ ಕೃಷಿ ಮಾರುಕಟ್ಟೆ ಸಮಿತಿ ಮೇಲ್ವಿಚಾರಕ ಋಷಿಕಾಂತ್ ಅವರನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಿದ್ದಾರೆ.
ಗ್ರಾಮೀಣ ಠಾಣೆಯ ಸತ್ಯನಾರಾಯಣ ಮತ್ತು ಬಸವರಾಜ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.