ADVERTISEMENT

ಕಲಬುರ್ಗಿ: ಕಳ್ಳರ ಕಾಲಿಗೆ ಗುಂಡೇಟು; ಕಾನ್‌ಸ್ಟೆಬಲ್‌ಗಳಿಗೂ ಗಾಯ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 6:37 IST
Last Updated 12 ಏಪ್ರಿಲ್ 2018, 6:37 IST
ಕಾನ್‌ಸ್ಟೆಬಲ್‌ ಭೀಮಾ‌ ನಾಯ್ಕ್  ಮತ್ತು ಬಂದೇ ನವಾಜ್
ಕಾನ್‌ಸ್ಟೆಬಲ್‌ ಭೀಮಾ‌ ನಾಯ್ಕ್ ಮತ್ತು ಬಂದೇ ನವಾಜ್   

ಕಲಬುರ್ಗಿ: ಪೊಲೀಸರು ಇಬ್ಬರು ದರೋಡೆಕೋರರ ಮೇಲೆ ನಗರದ ಹೊರವಲಯದ ಆಶ್ರಯ ಕಾಲೊನಿ ಬಳಿ ಗುರುವಾರ ಬೆಳಗಿನ ಜಾವ ಗುಂಡಿನ ದಾಳಿ ನಡೆಸಿದ್ದಾರೆ. ಗಾಯಗೊಂಡಿರುವ ಆರೋಪಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. 

ಆಳಂದ ಚೆಕ್ ಪೋಸ್ಟ್ ನಿವಾಸಿಗಳಾದ ಶೇಖರ್ ಮತ್ತು ಅಜೀಂ ಎಂಬುವರು ಕಳ್ಳತನಕ್ಕೆ ಬಂದಿದ್ದರು. ಈ ಕಾರ್ಯಾಚರಣೆಯಲ್ಲಿ ಕಾನ್‌ಸ್ಟೆಬಲ್‌ ಬಂದೇನವಾಜ್ ಹಾಗೂ ಭೀಮಾ‌ ನಾಯ್ಕ್ ಗಾಯಗೊಂಡಿದ್ದಾರೆ. ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳ್ಳತನಕ್ಕೆ ಬಂದ ಶೇಖರ್ ಮತ್ತು ಅಜೀಂ ಅವರ ಮೇಲೆ ಪಿಎಸ್ಐಗಳಾದ ಪರಶುರಾಮ ಮತ್ತು ವಾಹೀದ್ ಕೊತ್ವಾಲ್ ಗುಂಡು ಹಾರಿಸಿದ್ದಾರೆ. ಆಗ ಆರೋಪಿಗಳು ಪೊಲೀಸರ ಮೇಲೆ‌ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದರು.  

ADVERTISEMENT

‘ಆರೋಪಿಗಳು ದರೋಡೆ, ಕೊಲೆ ಯತ್ನ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕಲಬುರ್ಗಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.