ADVERTISEMENT

ಗುಂಡೇಟಿಗೆ ಕಾಡಾನೆ ಬಲಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ವಿರಾಜಪೇಟೆ ತಾಲ್ಲೂಕು ಪಾಲಂಗಾಲದ ಕಾಫಿ ತೋಟದಲ್ಲಿ ಮೃತಪಟ್ಟಿದ್ದ ಕಾಡಾನೆ
ವಿರಾಜಪೇಟೆ ತಾಲ್ಲೂಕು ಪಾಲಂಗಾಲದ ಕಾಫಿ ತೋಟದಲ್ಲಿ ಮೃತಪಟ್ಟಿದ್ದ ಕಾಡಾನೆ   

ವಿರಾಜಪೇಟೆ: ತಾಲ್ಲೂಕಿನ ಪಾಲಂಗಾಲದಲ್ಲಿ ಗುಂಡೇಟಿಗೆ ಕಾಡಾನೆ ಬಲಿಯಾಗಿದೆ.

ಕೋಡಿರ ಪ್ರವೀಣ್‌ ಅವರ ಕಾಫಿ ತೋಟದಲ್ಲಿ ಗುರುವಾರ 30 ವರ್ಷದ ಗಂಡು ಆನೆಯ ಮೃತದೇಹ ಪತ್ತೆಯಾಗಿದೆ. ಬೆಳಿಗ್ಗೆ ತೋಟಕ್ಕೆ ಮಾಲೀಕರು ಬಂದಾಗ ಆನೆ ಸತ್ತಿರುವುದು ಗೊತ್ತಾಗಿದೆ.

ಮರಣೋತ್ತರ ಪರೀಕ್ಷೆಯ ವೇಳೆ ಬೆನ್ನಿನ ಭಾಗದಲ್ಲಿ ಗುಂಡೇಟು ತಗುಲಿರುವ ಗುರುತು ಪತ್ತೆಯಾಗಿದ್ದು, ದುಷ್ಕರ್ಮಿಗಳು ಎರಡು ದಿನದ ಹಿಂದೆ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ. ತನಿಖೆ ನಡೆಸಲಾಗುತ್ತಿದೆ. ಎಸಿಎಫ್‌ ರೋಸ್ಲಿ, ವಲಯ ಅರಣ್ಯಾಧಿಕಾರಿ ಗೋಪಾಲ್‌ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಕಾಡಾನೆ ದಾಳಿ: ವ್ಯಕ್ತಿ ಸಾವು
ಸಕಲೇಶಪುರ: ತಾಲ್ಲೂಕಿನ ಹಾನುಬಾಳು ಸಮೀಪದ ಬಿಳಿಸಾರೆ ಗ್ರಾಮದ ಕಲ್ಲುಮಟ್ಲು ಬಳಿ ಗುರುವಾರ ಸಂಜೆ ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮನೆ ಹಿಂಭಾಗದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆನೆ ದಾಳಿ ನಡೆಸಿದ್ದು, ಜೋನಿ (35) ಸಾವನ್ನಪ್ಪಿದ್ದಾರೆ.

ಮೂರು ದಿನಗಳಿಂದ ಹುರುಡಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಅಡ್ಡಾಡುತ್ತಿದ್ದ ಒಂಟಿ ಸಲಗವೇ ದಾಳಿ ನಡೆಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.