ADVERTISEMENT

ಗುಜರಾತ್‌ನ ಜೆಂಟಲ್‌ಮನ್‌ ಹುಸಿ ಭರವಸೆ ತಂದಿದ್ದಾನೆ : ಅಮಿತ್‌ ಷಾ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 10:44 IST
Last Updated 31 ಮಾರ್ಚ್ 2018, 10:44 IST
ಅಮಿತ್‌ ಶಾ ಮತ್ತು ಸಿದ್ದರಾಮಯ್ಯ
ಅಮಿತ್‌ ಶಾ ಮತ್ತು ಸಿದ್ದರಾಮಯ್ಯ   

ಬೆಂಗಳೂರು: ‘ಗುಜರಾತ್‌ನಿಂದ ಬಂದಿರುವ ಜೆಂಟಲ್‌ಮನ್‌ ಕೈಚೀಲದ ತುಂಬ ಹುಸಿ ಭರವಸೆಗಳನ್ನು ತಂದಿದ್ದಾನೆ. ದಲಿತರಿಗೆ ಸ್ವರ್ಗ ಸುಖದ ಆಡಳಿತ ನೀಡುವುದಾಗಿ ಭರವಸೆ ನೀಡುತ್ತಿದ್ದಾನೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಚುನಾವಣಾ ಪ್ರಚಾರದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

‘ಆತನನ್ನು ಪ್ರಶ್ನಿಸುವ ದಲಿತರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಎಂದು ಪಟ್ಟಕಟ್ಟಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ದಲಿತ ಸಮುದಾಯದ ಮುಖಂಡರೊಂದಿಗೆ ಅಮಿತ್ ಶಾ ಮೈಸೂರಿನಲ್ಲಿ ಶುಕ್ರವಾರ ಸಂವಾದ ನಡೆಸಿದ ಸಮಯದಲ್ಲಿ ಗದ್ದಲ ಉಂಟಾಗಿತ್ತು. ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೆಲವರು ಧಿಕ್ಕಾರ ಕೂಗಿದ್ದರು.

‘ಸುಳ್ಳಿನ ಸರದಾರನನ್ನು(ಅಮಿತ್‌ ಶಾ) ನಂಬುವಂತ ತಪ್ಪನ್ನು ಕನ್ನಡಿಗರು ಮಾಡಲಾರರು’ ಎಂದು ಸಿ.ಎಂ. ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.