ADVERTISEMENT

ತುಮಕೂರು ವಿ.ವಿಗೆ ನೋಟಿಸ್‌

ಪ್ರಜಾವಾಣಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 19:30 IST
Last Updated 7 ಮಾರ್ಚ್ 2014, 19:30 IST

ಬೆಂಗಳೂರು: ನಿಯಮಾವಳಿ ಉಲ್ಲಂಘಿಸಿ 37 ಮಂದಿ ಬೋಧಕೇತರ ಸಿಬ್ಬಂದಿಯ ಪ್ರೊಬೇ­ಷನರಿ ಅವಧಿ ಮುಕ್ತಾ­ಯ­­­ಗೊಳಿಸಿದ ತುಮಕೂರು ವಿಶ್ವ­ವಿ­ದ್ಯಾ­ಲ­­ಯದ ಕ್ರಮ ಕಾನೂನು ಬಾಹಿರ ಎಂದು ಉನ್ನತ ಶಿಕ್ಷಣ ಇಲಾಖೆ ಹೇಳಿದೆ.

ಈ ಹಗರಣ ನಡೆದಿದ್ದು ಡಾ. ಎಸ್‌.­ಸಿ. ಶರ್ಮಾ  ಕುಲಪತಿಯಾಗಿದ್ದ ಅವ­ಧಿ­­ಯಲ್ಲಿ. ಇದನ್ನು  ಜನವರಿ 7ರಂದು ‘ಪ್ರಜಾವಾಣಿ’ ಬೆಳಕಿಗೆ ತಂದಿತ್ತು. ಇದೇ ವರದಿ ಆಧರಿಸಿ ಇಲಾ­ಖೆಯ ಪ್ರಧಾನ ಕಾರ್ಯ­ದರ್ಶಿ ರಜ­ನೀಶ್‌ ಗೋಯಲ್‌ ಅವರು ತುಮ­ಕೂರು ವಿಶ್ವವಿದ್ಯಾಲಯದ ಕುಲ­ಪತಿಗೆ ಮಾ.7ರಂದು ಷೋಕಾಸ್ ನೋಟಿಸ್‌ ಜಾರಿ ಮಾಡಿದ್ದಾರೆ.

ಬೋಧಕೇತರ ಸಿಬ್ಬಂದಿಯ ಪ್ರೊಬೇ­ಷ­ನರಿ ಅವಧಿ ಮುಕ್ತಾಯವಾಗಿರು­ವು­ದನ್ನು ಘೋಷಿಸಲು ಬೆಂಗಳೂರು ವಿ.ವಿ ನಿಯ­ಮಾ­ವಳಿ­ಗಳನ್ನು ತುಮ­ಕೂರು ವಿ.ವಿ ಅನುಸರಿ­ಸಿದೆ. ಆದರೆ ಇದು ನೇಮಕಾತಿ ಮತ್ತು ಮುಂಬ­ಡ್ತಿಗೆ ಮಾತ್ರ ಅನ್ವಯ­ವಾಗು­ತ್ತ­ದೆಯೇ ಹೊರತು ಪೂರ್ವಾ­ವಧಿ ಮುಕ್ತಾಯ  ಘೋಷಿಸಲು ಅಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ನಿಯ­ಮಾ­ವಳಿ ರಚಿಸಿಕೊಂಡು ಸಕ್ಷಮ ಪ್ರಾಧಿ­ಕಾರದ ಅನುಮೋದನೆ ಪಡೆಯ­ಬೇಕು.

ಆದರೆ, ಇದ್ಯಾವುದನ್ನು ಪಾಲಿಸದೆ ಕಾಯಂ ಪೂರ್ವ ಸೇವಾವಧಿ ಮುಕ್ತಾ­ಯ­ವಾಗಿದೆ ಎಂದು ಘೋಷಿಸಿರುವುದು ಕಾನೂನು­ಬಾಹಿರ ಎಂದು ನೋಟಿಸ್‌­ನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.