ADVERTISEMENT

ಪತ್ರಕರ್ತರಿಗೆ ನಿವೇಶನ: ಪತ್ರಿಕಾಗೋಷ್ಠಿಯಲ್ಲೇ ಆಮಿಷ ಒಡ್ಡಿದ ಜೆಡಿಎಸ್‌ ಮುಖಂಡ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 9:50 IST
Last Updated 6 ಏಪ್ರಿಲ್ 2018, 9:50 IST
ಪತ್ರಕರ್ತರಿಗೆ ನಿವೇಶನ: ಪತ್ರಿಕಾಗೋಷ್ಠಿಯಲ್ಲೇ ಆಮಿಷ ಒಡ್ಡಿದ ಜೆಡಿಎಸ್‌ ಮುಖಂಡ
ಪತ್ರಕರ್ತರಿಗೆ ನಿವೇಶನ: ಪತ್ರಿಕಾಗೋಷ್ಠಿಯಲ್ಲೇ ಆಮಿಷ ಒಡ್ಡಿದ ಜೆಡಿಎಸ್‌ ಮುಖಂಡ   

ರಾಮನಗರ: ಕುಮಾರಸ್ವಾಮಿ ಮುಖ್ಯಮಂತ್ರಿ ಆದಲ್ಲಿ ಇಲ್ಲಿನ ಪತ್ರಕರ್ತರಿಗೆ ನಿವೇಶನ ಕೊಡಿಸುವುದಾಗಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿ ಅಚ್ಚರಿ‌ ಮೂಡಿಸಿದರು.

ಪತ್ರಕರ್ತರಿಗೆ ನಿವೇಶನ ಹಂಚಿಕೆ ಯೋಜನೆಯು ನನೆಗುದಿಗೆ ಬಿದ್ದಿದ್ದು, ಕುಮಾರಸ್ವಾಮಿ ಶಾಸಕರಾಗಿ‌ ಆಯ್ಕೆಯಾಗಿ ಅಧಿಕಾರ ಹಿಡಿಯುತ್ತಿದ್ದಂತೆಯೇ ಅದಕ್ಕೆ ಚಾಲನೆ ನೀಡಲಾಗುವುದು ಎಂದರು‌.

ಇದರಿಂದ ಮುಜುಗರಕ್ಕೊಳಗಾದ ಇತರ ಮುಖಂಡರು‌ ತಪ್ಪನ್ನು ಸರಿಪಡಿಸುವ ಪ್ರಯತ್ನ ಮಾಡಿದರು.

ADVERTISEMENT

ಮುಂದುವರಿದು 'ಕುಮಾರಸ್ವಾಮಿ ಎರಡೂ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಬಳಿಕ ಚನ್ನಪಟ್ಟಣ ಕ್ಷೇತ್ರಕ್ಕೆ ರಾಜೀನಾಮೆ ನೀಡಲಿದ್ದಾರೆ' ಎನ್ನುವ ಮೂಲಕವೂ ಮುಖಂಡರನ್ನು ಪೇಚಿಗೆ ಸಿಲುಕಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.