ಮಂಡ್ಯ: ‘ಲೋಕಾಯುಕ್ತರಿಗೆ ಗನ್ಮ್ಯಾನ್ ಇದ್ದಾರೆ. ಸೂಕ್ತ ಭದ್ರತೆಯೂ ಇದೆ. ಆದರೂ ಆಗಬಾರದ್ದು ಆಗಿ ಹೋಗಿದೆ. ಈ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿ, ‘ಭದ್ರತೆ ವೈಫಲ್ಯದ ಬಗ್ಗೆ ತನಿಖೆಗೆ ಸೂಚನೆ ನೀಡಲಾಗಿದೆ. ಲೋಪ ಕಂಡುಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು. ಬಿಜೆಪಿ ಮುಖಂಡರು ರಾಷ್ಟ್ರಪತಿ ಆಡಳಿತ ಜಾರಿಗೆ ಒತ್ತಾಯ ಮಾಡುತ್ತಿದ್ದಾರೆ. ಅವರಿಗೆ ಸಂವಿಧಾನ ಗೊತ್ತಿಲ್ಲ. ನನ್ನ ರಾಜೀನಾಮೆ ಕೇಳಲು ಅವರು ಯಾರು? ಈಶ್ವರಪ್ಪ ಮಹಾನ್ ಪೆದ್ದ, ಅವರಿಗೆ ಮಿದುಳು ಇಲ್ಲ’ ಎಂದು ಟೀಕಿಸಿದರು.
‘ರಾಜ್ಯಸಭೆ ಚುನಾವಣೆಗೂ ಬಿಬಿಎಂಪಿ ಹೊಂದಾಣಿಕೆಗೂ ಸಂಬಂಧ ಇಲ್ಲ. ಬಿಬಿಎಂಪಿಯಲ್ಲಿ ಜೆಡಿಎಸ್ ಬೆಂಬಲ ವಾಪಸ್ ಪಡೆದರೆ ಪಡೆದುಕೊಳ್ಳಲಿ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.