ADVERTISEMENT

ಮಳೆಗೆ ಗೋಡೆ ಕುಸಿದು 15 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 21 ಮೇ 2018, 19:30 IST
Last Updated 21 ಮೇ 2018, 19:30 IST
ಕಲಬುರ್ಗಿ ಜಿಲ್ಲೆ ಸೇಡಂ ಪಟ್ಟಣದ ಲಕ್ಷ್ಮೀನಾರಾಯಣ ಮಂದಿರ ಬಳಿ ಸೋಮವಾರ ಬಿರುಗಾಳಿಗೆ ಮರ ರಸ್ತೆ ಮೇಲೆ ಉರುಳಿ ಬಿದ್ದಿರುವುದು
ಕಲಬುರ್ಗಿ ಜಿಲ್ಲೆ ಸೇಡಂ ಪಟ್ಟಣದ ಲಕ್ಷ್ಮೀನಾರಾಯಣ ಮಂದಿರ ಬಳಿ ಸೋಮವಾರ ಬಿರುಗಾಳಿಗೆ ಮರ ರಸ್ತೆ ಮೇಲೆ ಉರುಳಿ ಬಿದ್ದಿರುವುದು   

ಸೇಡಂ (ಕಲಬುರ್ಗಿ): ಪಟ್ಟಣದಲ್ಲಿ ಸೋಮವಾರ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು, ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದು 15 ಜನರು ಗಾಯಗೊಂಡಿದ್ದಾರೆ.

ಸಂಜೆ 4ರಿಂದ 5ಗಂಟೆಯವರೆಗೆ ರಭಸದಿಂದ ಮಳೆ ಸುರಿಯಿತು. ಸಾರ್ವಜನಿಕರು ಆಶ್ರಯ ಪಡೆಯಲೆಂದು ಕಟ್ಟಡವೊಂದರ ಮುಂಭಾಗದಲ್ಲಿ ಅಳವಡಿಸಿದ್ದ ಟಿನ್‌ ಶೀಟ್‌ಗಳ ಕೆಳಗೆ ನಿಂತಿದ್ದರು. ಈ ವೇಳೆ  ಗೋಡೆ ಕುಸಿದು ಶೀಟ್‌ಗಳ ಮೇಲೆ ಬಿದ್ದಿದೆ. ಇದರಿಂದ ಇಬ್ಬರಿಗೆ ಗಂಭೀರ ಹಾಗೂ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಂಪೆರೆದ ಮಳೆ: ತಾಲ್ಲೂಕಿನ ಕುರಕುಂಟಾ, ಮದಕಲ್, ಹೈಯ್ಯಾಳ, ಸಟಪಟನಳ್ಳಿ, ಸೂರವಾರದಲ್ಲಿ ಬಿರುಗಾಳಿ ಜೊತೆ ಮಳೆ ಆರ್ಭಟಿಸಿತು.

ADVERTISEMENT

ಮೈಸೂರು ವರದಿ: ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.