ಕಲಬುರ್ಗಿ: ತಾಲ್ಲೂಕಿನ ಶರಣಸಿರಸಗಿ ಗ್ರಾಮದಲ್ಲಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಯಶ್ರೀ ಗೋಡಕೆ(35) ಹಾಗೂ ಅವರ ಮಕ್ಕಳಾದ ಪವಿತ್ರಾ(12), ಸುನಿಲ್(10), ಅನಿಲ್(6) ಮೃತರು.
ಭಾನುವಾರ ಸಂಜೆಯೇ ಜಯಶ್ರೀ ಅವರು ತಮ್ಮ ಜಮೀನಿನಲ್ಲಿರುವ ಬಾವಿಗೆ ಹಾರಿದ್ದರು. ನೀರಿನಲ್ಲಿ ಶವ ತೇಲುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಡರಾತ್ರಿಯೇ ಜಯಶ್ರೀ ಅವರ ಶವ ಹೊರತೆಗೆಯಲಾಯಿತು. ಬಾವಿಯಲ್ಲಿ ನೀರು ಹೆಚ್ಚಾಗಿದ್ದರಿಂದ ಮಕ್ಕಳ ಶವ ಹೊರ ತೆಗೆಯಲು ಆಗಿರಲಿಲ್ಲ. ಸೋಮವಾರ ಬೆಳಿಗ್ಗೆ ಅಗ್ನಿಶಾಮಕ ದಳ, ಪೊಲೀಸರು ಕಾರ್ಯಾಚರಣೆ ನಡೆಸಿ, ಪಂಪ್ಸೆಟ್ ಬಳಸಿ ಬಾವಿಯ ನೀರನ್ನೆಲ್ಲ ಖಾಲಿ ಮಾಡಿ ಉಳಿದವರ ಮೃತದೇಹಗಳನ್ನು ಹೊರತೆಗೆದರು. ಮಕ್ಕಳ ಶವಗಳನ್ನು ಟ್ರಾಕ್ಟರ್ನಲ್ಲಿ ಗ್ರಾಮಕ್ಕೆ ತಂದಾಗ ಕುಟುಂಬದವರ ಆಕ್ರಂದನ ಮುಗಿಲುಮಟ್ಟಿತ್ತು.
ಪತಿ ಮದ್ಯವ್ಯಸನಿಯಾಗಿದ್ದು, ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಇದರಿಂದ ಬೇಸತ್ತ ಜಯಶ್ರೀ ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.