ADVERTISEMENT

‘ಮೌಢ್ಯ ಆಚರಿಸುವವರ ಸಂಪುಟ ಸೇರಿದ್ದು ಅನಿವಾರ್ಯತೆಯಿಂದ’

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 19:32 IST
Last Updated 29 ಡಿಸೆಂಬರ್ 2018, 19:32 IST

ಲಿಂಗಸುಗೂರು (ರಾಯಚೂರು ಜಿಲ್ಲೆ):‘ಮೌಢ್ಯ, ಕಂದಾಚಾರ, ಅಸಮಾನತೆ ವಿರೋಧಿಸುತ್ತೇನೆ. ಆದರೆ, ಮೌಢ್ಯ ಆಚರಣೆ ಮೂಲಕ ಮುಖ್ಯಮಂತ್ರಿಯಾದ ಎಚ್‌.ಡಿ. ಕುಮಾರಸ್ವಾಮಿ ಅವರ ಸಂಪುಟದಲ್ಲಿ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಶುಕ್ರವಾರ ರಾತ್ರಿ ನಗರಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದಿದೆ. ಮೌಢ್ಯಗಳನ್ನು ಬಹಿರಂಗವಾಗಿ ಆಚರಿಸುತ್ತಿರುವ ಕುಮಾರಸ್ವಾಮಿ ವಿರುದ್ಧ ತಮ್ಮ ಹೋರಾಟ ಮೊಟಕುಗೊಳಿಸಿದ್ದು ನ್ಯಾಯವೇ’ ಎಂಬ ಪ್ರಶ್ನೆಗೆ ಕೆಲ ಸಮಯ ತಬ್ಬಿಬ್ಬಾದ ಸಚಿವರು, ‘ಕಾಲಘಟ್ಟ ನಿರ್ಣಯಿಸುತ್ತದೆ. ಪೂರ್ಣ ಪ್ರಮಾಣದ ಸರ್ಕಾರ ಬಂದಾಗ ನೋಡೋಣ’ ಎಂದು ನುಣುಚಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.