ADVERTISEMENT

ಯಡಿಯೂರಪ್ಪಗೂ ಅಡ್ವಾಣಿ ಸ್ಥಿತಿ ಬರುತ್ತದೆ: ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 5:17 IST
Last Updated 29 ಏಪ್ರಿಲ್ 2018, 5:17 IST
ಯಡಿಯೂರಪ್ಪಗೂ ಅಡ್ವಾಣಿ ಸ್ಥಿತಿ ಬರುತ್ತದೆ: ಇಬ್ರಾಹಿಂ
ಯಡಿಯೂರಪ್ಪಗೂ ಅಡ್ವಾಣಿ ಸ್ಥಿತಿ ಬರುತ್ತದೆ: ಇಬ್ರಾಹಿಂ   

ಬೆಳಗಾವಿ: ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ಸ್ಥಿತಿಯೇ ಬಿ.ಎಸ್. ಯಡಿಯೂರಪ್ಪ ಅವರಿಗೂ ಬರಲಿದೆ. ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಹೇಳಿದರು.

ಇಲ್ಲಿನ ಇಫಾ ಹೋಟೆಲಲ್ಲಿ ತಂಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವುದಕ್ಕಾಗಿ ಬಂದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಅಧಿಕಾರ ಸಿಗುವವರೆಗೂ ಹಿಂದೂ ಅಂಥ ಬಳಸಿಕೊಳ್ಳುತ್ತಾರೆ. ನಂತರ ಬಿ.ಎಸ್.ವೈ ಹಾಗೂ ಹೆಗಡೆನ ಹಿಂದೆ ಬಿಡುತ್ತಾರೆ ಎಂದು ಲೇವಡಿ ಮಾಡಿದರು. ಯಡಿಯೂರಪ್ಪ ಅವರ ಬಗ್ಗೆ ನನಗೆ ಅನುಕಂಪವಿದೆ ಎಂದರು.

ADVERTISEMENT

ಬಳ್ಳಾರಿ ಬೆಟ್ಟ ಅಗೆದವರು ಈಗ ಬಾದಾಮಿಯಲ್ಲಿ ಬೆಟ್ಟ ಅಗೆಯಬೇಕು ಎಂಬ ಕಲ್ಪನೆಯಲ್ಲಿ ಬಂದಿದ್ದಾರೆ. ಜನರು ಅದಕ್ಕೆ ಅವಕಾಶ ಕೊಡುವುದಿಲ್ಲ. ಸಿದ್ದರಾಮಯ್ಯ ಅಲ್ಲಿ ಐತಿಹಾಸಿಕ ಮುನ್ನಡೆ ತೆಗೆದುಕೊಂಡು ಗೆಲ್ಲುತ್ತಾರೆ. ಕಾಂಗ್ರೆಸ್‌ನ ಎಲ್ಲ ಮುಖಂಡರೂ ಅಲ್ಲಿ ಬೆಂಬಲಿಸುತ್ತಾರೆ. ಐದು ವರ್ಷ ನೀಡಿದ ಅಭಿವೃದ್ಧಿ ಕಾರ್ಯಗಳು ನೆರವಾಗುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನರೇಂದ್ರ ‌ಮೋದಿ ಅವರು ಭಾರತದ ವಿಕಾಸ ‌ಎಂದುಕೊಂಡು ಅವರ ವಿಕಾಸ ಮಾಡಿಕೊಳ್ಳುತ್ತಿದ್ದಾರೆ. ಉದ್ಯಮಿಗಳಾದ ಅಂಬಾನಿ, ಅದಾನಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.