ADVERTISEMENT

ಯುವಕ – ಯುವತಿಯರ ಸಲುಗೆ: ಆತಂಕ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 19:30 IST
Last Updated 13 ಡಿಸೆಂಬರ್ 2017, 19:30 IST
ಯುವಕ- ಯುವತಿಯರ ಅನುಚಿತವಾಗಿ ವರ್ತಿಸಿದ ವಿಷಯ ತಿಳಿದು ಬುಧವಾರ ಸಂಜೆ ಕೋಡಿಬೆಂಗ್ರೆಯಲ್ಲಿ ಜಮಾಯಿಸಿದ್ದ ಜನ.
ಯುವಕ- ಯುವತಿಯರ ಅನುಚಿತವಾಗಿ ವರ್ತಿಸಿದ ವಿಷಯ ತಿಳಿದು ಬುಧವಾರ ಸಂಜೆ ಕೋಡಿಬೆಂಗ್ರೆಯಲ್ಲಿ ಜಮಾಯಿಸಿದ್ದ ಜನ.   

ಉಡುಪಿ: ಮಲ್ಪೆ ಸಮೀಪದ ಕೋಡಿಬೆಂಗ್ರೆ ಕಡಲ ತೀರದ ಬಳಿ ಬುಧವಾರ ಅತಿ ಸಲುಗೆಯಿಂದವರ್ತಿಸುತ್ತಿದ್ದ ಯುವಕ- ಯುವತಿಯರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ ಪರಿಣಾಮ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಿಣಾಮ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

ಮುಸ್ಲಿಂ ಸಮುದಾಯಕ್ಕೆ ಸೇರಿದ ಮೂವರು ಯುವಕರು ಹಾಗೂ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಕ್ಕೆ ಸೇರಿದ ಯುವತಿಯರು ಕಡಲ ತೀರಕ್ಕೆ ಬಂದಿದ್ದರು. ಅವರು ಅತಿ ಸಲುಗೆಯಿಂದ ವರ್ತಿಸುತ್ತಿದ್ದುದನ್ನು ಗಮನಿಸಿದ ಸ್ಥಳೀಯರು. ಆಕ್ಷೇಪ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಯುವತಿಯರ ಪೋಷಕರನ್ನು ಕರೆಯಿಸಿ ಘಟನೆ ವಿವರಿಸಿ ಬಿಟ್ಟು ಕಳುಹಿಸಿದರು. ಯುವಕರನ್ನು ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಿ ಕಳುಹಿಸಿದರು.

ADVERTISEMENT

ಯುವತಿಯ ಜನ್ಮದಿನವನ್ನು ಆಚರಿಸಲು ಅವರು ಬಂದಿದ್ದರು. ಸ್ಥಳೀಯರು, ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಯುವತಿಯರ ಪೋಷಕರನ್ನು ಕರೆಯಿಸಿ ಎಂದು ಪಟ್ಟುಹಿಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಗಲಭೆ ಸಂಭವಿಸಿದ ಪರಿಣಾಮ ಹೆಚ್ಚು ಪೊಲೀಸರನ್ನು ನಿಯೋಜಿಸಲಾಯಿತು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.