ADVERTISEMENT

ರೆಸಾರ್ಟ್‌ ಕಡೆಗೆ ಕಾಂಗ್ರೆಸ್‌ ಶಾಸಕರು

​ಪ್ರಜಾವಾಣಿ ವಾರ್ತೆ
Published 16 ಮೇ 2018, 16:13 IST
Last Updated 16 ಮೇ 2018, 16:13 IST
ರೆಸಾರ್ಟ್‌ ಕಡೆಗೆ ಕಾಂಗ್ರೆಸ್‌ ಶಾಸಕರು
ರೆಸಾರ್ಟ್‌ ಕಡೆಗೆ ಕಾಂಗ್ರೆಸ್‌ ಶಾಸಕರು   

ಬೆಂಗಳೂರು: ಕಾಂಗ್ರೆಸ್‌ ಶಾಸಕರು ಕೆಪಿಸಿಸಿ ಕಚೇರಿಯಿಂದ ಖಾಸಗಿ ಬಸ್‌ ಮೂಲಕ ರೆಸಾರ್ಟ್‌ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಕುದುರೆ ವ್ಯಾಪಾರ ತಪ್ಪಿಸಲು ಕಾಂಗ್ರೆಸ್‌ ಶಾಸಕರನ್ನು ಬಿಡದಿ ಸಮೀಪದ ಈಗಲ್ಟನ್‌ ರೆಸಾರ್ಟ್‌ಗೆ ಕರೆದೊಯ್ಯಲಾಗುತ್ತಿದೆ. ಇದಕ್ಕೂ ಮುನ್ನ ಶಾಸಕರು ರಾಜಭವನಕ್ಕೆ ತೆರಳಿದ್ದರು. ಬಳಿಕ ಕೆಪಿಸಿಸಿ ಕಚೇರಿಗೆ ಮರಳಿ ಸಭೆಯಲ್ಲಿ ಭಾಗಿಯಾಗಿದ್ದರು.

'ಹೊಟೇಲ್‌ ಅಥವಾ ಎಲ್ಲಿಗೂ ಹೋದರೂ ಎಲ್ಲ ಶಾಸಕರೂ ಜೊತೆಯಲ್ಲಿಯೇ ಇರುತ್ತಾರೆ ಹಾಗೂ ವಿಚಾರಗಳನ್ನು ಚರ್ಚಿಸುತ್ತಾರೆ. ಕುದುರೆ ವ್ಯಾಪಾರ ಶುರು ಮಾಡಿರುವುದರಿಂದ ಕಾಂಗ್ರೆಸ್‌ ತಮ್ಮ ಶಾಸಕರನ್ನು ಒಟ್ಟಿಗೆ ಸೇರಿಸುವ ಕ್ರಮ ವಹಿಸಿದೆ’ ಎಂದು ಅಶೋಕ್‌ ಗೆಹ್ಲೊಟ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.