ಮೂಡುಬಿದಿರೆ: ಆಳ್ವಾಸ್ ವಿರಾಸತ್ -2018ರ ಅಂಗವಾಗಿ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಇದೇ 9ರಿಂದ 14ರವರೆಗೆ ರಾಷ್ಟ್ರ ಮಟ್ಟದ ಸಮಕಾಲೀನ ಚಿತ್ರಕಲಾ ಶಿಬಿರ ‘ಆಳ್ವಾಸ್ ವರ್ಣ ವಿರಾಸತ್’ ನಡೆಯಲಿದೆ. ಶಿಬಿರದಲ್ಲಿ ಸುಮಾರು 20 ಹಿರಿಯ ಹಾಗೂ ಯುವ ಕಲಾವಿದರು ಭಾಗವಹಿಸಲಿದ್ದಾರೆ.
‘ಎಲ್ಲ ಕಲಾವಿದರು ಅಕ್ರಿಲಿಕ್ ಮಾಧ್ಯಮದಲ್ಲಿ ಕಲಾಕೃತಿಗಳನ್ನು ರಚಿಸಲಿದ್ದು, 40 ವಿವಿಧ ಬಗೆಯ ಕಲಾಕೃತಿಗಳು ಮೂಡಿಬರಲಿವೆ.
ಸಾರ್ವಜನಿಕರಿಗೆ ಶಿಬಿರದ ಕಲಾವಿದರೊಂದಿಗೆ ಮುಕ್ತ ಮಾತುಕತೆ ನಡೆಸಲು ಹಾಗೂ ಕಲಾಕೃತಿ ರಚನಾಪ್ರಕ್ರಿಯೆಯನ್ನು ಸವಿಯಲು ಅವಕಾ
ಶವಿದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಅಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.