ADVERTISEMENT

ಮಾತೃಭೂಮಿಗಾಗಿ ಹೋರಾಡಿದ್ದ ವೀರ ಟಿಪ್ಪು: ಬಿಎಸ್‌ವೈ ಬರೆದಿದ್ದ ಟಿಪ್ಪಣಿ ವೈರಲ್‌

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 15:42 IST
Last Updated 31 ಅಕ್ಟೋಬರ್ 2019, 15:42 IST
   

ಶ್ರೀರಂಗಪಟ್ಟಣ: ಸಮೀಪದ ಗಂಜಾಂನಲ್ಲಿರುವ ಟಿಪ್ಪು ಸಮಾಧಿ ಸ್ಥಳ ಗುಂಬಸ್‌ಗೆ 2012ರ ಡಿ. 13ರಂದು ಭೇಟಿ ನೀಡಿದ್ದ ಬಿ.ಎಸ್‌.ಯಡಿಯೂರಪ್ಪ, ಸಂದರ್ಶಕರ ಪುಸ್ತಕದಲ್ಲಿ ಟಿಪ್ಪುಸುಲ್ತಾನ್‌ನನ್ನು ಹೊಗಳಿ ಬರೆದ ಟಿಪ್ಪಣಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

‘ನಮ್ಮ ಮಾತೃಭೂಮಿ ಭಾರತವನ್ನು ರಕ್ಷಿಸಲು ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ವೀರ ಟಿಪ್ಪುಸುಲ್ತಾನ್‌’ ಎಂದು ಅವರು ಬರೆದಿದ್ದಾರೆ.

ಟಿಪ್ಪುಸುಲ್ತಾನ್‌ ಜಯಂತಿ ಸ್ಥಗಿತ, ಟಿಪ್ಪು ಕುರಿತ ಪಠ್ಯ ತೆಗೆದು ಹಾಕುವ ನಿರ್ಧಾರ ಕೈಗೊಂಡಿರುವ ಈ ಸಮಯದಲ್ಲಿ ಆ ಟಿಪ್ಪಣಿ ಮಹತ್ವ ಪಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.