ಮಂಗಳೂರು: ಕೋವಿಡ್–19 ನಿಯಂತ್ರಣ ಚಟುವಟಿಕೆಗಳ ನಿರ್ವಹಣೆಗಾಗಿ ಪ್ರಧಾನ ಮಂತ್ರಿ ಆರಂಭಿಸಿರುವ ಪಿಎಂ ಕೇರ್ಸ್ ನಿಧಿಗೆ ಇಲ್ಲಿನ ಎಂಆರ್ಪಿಎಲ್(ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್) ಒಟ್ಟು ₹ 4 ಕೋಟಿ ದೇಣಿಗೆ ನೀಡಿದೆ.
ಎಂಆರ್ಪಿಎಲ್ನಿಂದ 2019–20 ಹಾಗೂ 2020–21 ನೇ ಸಾಲಿನ ಸಿಎಸ್ಆರ್ ನಿಧಿಯಡಿ ಒಟ್ಟು ₹ 3 ಕೋಟಿ ದೇಣಿಗೆ ನೀಲಾಗಿದೆ. ಇದರ ಜತೆಗೆ ಎಂಆರ್ಪಿಎಲ್ನ ನೌಕರರ ವೇತನದಿಂದ ₹ 1 ಕೋಟಿ ದೇಣಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.