ADVERTISEMENT

ಸಾಹಿತಿ ಸತ್ಯಾನಂದ ಪಾತ್ರೋಟಗೆ ‘ಮುದ್ದಣ ಕಾವ್ಯ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 19:42 IST
Last Updated 5 ನವೆಂಬರ್ 2019, 19:42 IST
ಸತ್ಯಾನಂದ ಪಾತ್ರೋಟ
ಸತ್ಯಾನಂದ ಪಾತ್ರೋಟ   

ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ಪಟೇಲ್ ಪುನರೂರು ವಾಸುದೇವರಾವ್ ಟ್ರಸ್ಟ್‌ ಪ್ರಾಯೋಜಕತ್ವದ 2019ರ ಸಾಲಿನ ‘ಮುದ್ದಣ ಕಾವ್ಯ ಪ್ರಶಸ್ತಿ’ಯನ್ನು ಬಾಗಲಕೋಟೆಯ ಸಾಹಿತಿ ಡಾ. ಸತ್ಯಾನಂದ ಪಾತ್ರೋಟ ಅವರ 'ಬಟಾಬಯಲು' ಕವನ ಸಂಕಲನಕ್ಕೆ ನೀಡಲಾಗಿದೆ.

ಪ್ರಶಸ್ತಿಯು ₹ 10,000 ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು 2020ರ ಫೆಬ್ರುವರಿಯಲ್ಲಿ ಕಾಂತಾವರದ 'ಕನ್ನಡಭವನ'ದಲ್ಲಿ ನಡೆಯಲಿದೆ. ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಸದಾನಂದ ನಾರಾವಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT