ಸಂಡೂರು: ‘ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಅವರ ಸಹೋದರ ಬಿಜೆಪಿ ಸೇರಿರಬಹುದು. ಆದರೆ, ನಾಗೇಂದ್ರ ಅವರು ಕಾಂಗ್ರೆಸ್ನಲ್ಲೇ ಇರ್ತಾರೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಭರವಸೆ ವ್ಯಕ್ತಪಡಿಸಿದರು.
ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾಗೇಂದ್ರಗೆ ವಾರ್ನಿಂಗ್ ಮಾಡಿಲ್ಲ. ಅಣ್ಣ–ತಮ್ಮನ ನಡುವೆ ಭಿನ್ನಾಭಿಪ್ರಾಯ ಇರುತ್ತವೆ. ಅವರಣ್ಣ ಬಿಜೆಪಿಗೆ ಹೋದರೆ ನಾಗೇಂದ್ರ ಹೋಗುತ್ತಾರೆ ಎಂದರ್ಥವಲ್ಲ. ಮನುಷ್ಯ ತಪ್ಪು ಮಾಡೋದು ಸಹಜ. ನಾಗೇಂದ್ರ ನಮ್ಮ ಮನೆ ಹುಡುಗ. ನಾನು ಅವರನ್ನು ಭೇಟಿ ಮಾಡುತ್ತೇನೆ. ಉಗ್ರಪ್ಪ ಅವರು ನಾಮಪತ್ರ ಸಲ್ಲಿಸುವ ವೇಳೆ ಅವರು ಬರುತ್ತಾರೆ’ ಎಂದರು.
‘ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಅವರ ಮಗ ಅಬಕಾರಿ ಇಲಾಖೆಯಲ್ಲಿ ಇದ್ದಾರೆ. ಕೆಲವು ಮದ್ಯದಂಗಡಿ ಮಾಲೀಕರಿಗೆ ಧಮ್ಕಿ ಹಾಕಿದ್ದಾರೆ ಎಂಬ ಮಾಹಿತಿ ಇದೆ. ಅವರು ಹಾಗೆ ನಡೆದುಕೊಳ್ಳಲು ಬಿಡುವುದಿಲ್ಲ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.