ADVERTISEMENT

ಸಚಿವ ತುಕಾರಂ ಶೂ ಕಾರ್ಯಕರ್ತನ ಕೈಯಲ್ಲಿ!

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 16:06 IST
Last Updated 2 ಜನವರಿ 2019, 16:06 IST
ಈ.ತುಕಾರಾಂ
ಈ.ತುಕಾರಾಂ   

ಬಳ್ಳಾರಿ: ಸಚಿವರಾದ ಬಳಿಕ ನಗರಕ್ಕೆ ಮೊದಲ ಬಾರಿಗೆ ಬುಧವಾರ ಭೇಟಿ ನೀಡಿದ ಈ.ತುಕಾರಾಂ ಅವರು ಕನಕದುರ್ಗಮ್ಮ ಗುಡಿಯಲ್ಲಿ ಪೂಜೆ ಸಲ್ಲಿಸಿ ಕಾರು ಹತ್ತಿ ಕುಳಿತ ಬಳಿಕ ಕಾರ್ಯಕರ್ತರೊಬ್ಬರು ಅವರ ಶೂಗಳನ್ನು ತಂದು ಕೊಡುವ ವೀಡಿಯೋ ವೈರಲ್‌ ಆಗಿತ್ತು.

ಮಧ್ಯಾಹ್ನ 1.30ರ ವೇಳೆಗೆ ಸಚಿವರು ಗುಡಿಗೆ ಭೇಟಿ ನೀಡಿದ ಬಳಿಕ, ಗುಡಿಯ ಬಾಗಿಲಲ್ಲೇ ನಿಂತಿದ್ದ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತರು. ನಂತರ, ಕಾರಿನ ಡಿಕ್ಕಿಯಲ್ಲಿದ್ದ ಅವರ ಶೂಗಳನ್ನು ಕಾರ್ಯಕರ್ತರೊಬ್ಬರು ತಂದು ಅವರ ಪಾದದ ಬಳಿ ಇಟ್ಟರು. ಶೂಗಳನ್ನು ತಂದವರು ಸಚಿವರ ಸಂಬಂಧಿಕರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT