ADVERTISEMENT

ಶಿಕ್ಷಕರ ವರ್ಗಾವಣೆ: ಸಚಿವರಿಂದ ಸಭೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 9:29 IST
Last Updated 30 ಆಗಸ್ಟ್ 2019, 9:29 IST
ಶಿಕ್ಷಕರ ವರ್ಗಾವಣೆ– ಸಾಂದರ್ಭಿಕ ಚಿತ್ರ
ಶಿಕ್ಷಕರ ವರ್ಗಾವಣೆ– ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಿಕ್ಷಕರ ವರ್ಗಾವಣೆ ಕುರಿತಂತೆ ಪ್ರಾಥಮಿಕ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ಅವರು ವಿಕಾಸ ಸೌಧದಲ್ಲಿ ಆಧಿಕಾರಿಗಳ ಸಭೆ ನಡೆಸುತ್ತಿದ್ದು, ವರ್ಗಾವಣೆ ಮುಂದುವರಿಸುವ ನಿಟ್ಟಿನಲ್ಲಿ ನಿರ್ಧಾರಕ್ಕೆ ಬರುವ ನಿರೀಕ್ಷೆ ಇದೆ.

ಕಡ್ಡಾಯ ವರ್ಗಾವಣೆ ಕುರಿತಂತೆ ನಗರ ಪ್ರದೇಶಗಳ ಶಿಕ್ಷಕರ ಅಹವಾಲು ಸ್ವೀಕರಿಸಿ ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ ಸಚಿವರ ಕ್ರಮಕ್ಕೆ ಗ್ರಾಮಾಂತರ ಭಾಗದ ಶಿಕ್ಷಕರು ವಿರೋಧ ವ್ಯಕ್ತಪಡಿಸಿದ್ದರು.

ಸುಧಾರಣೆಯ ಜತೆಗೆ ವರ್ಗಾವಣೆಪ್ರಕ್ರಿಯೆ ಮುಂದುವರಿಯಲಿದೆಯೇ ಎಂಬ ನಿರೀಕ್ಷೆ ಬಲವಾಗಿದೆ.

ADVERTISEMENT

ಶೇ 20ಕ್ಕಿಂತ ಅಧಿಕ ಖಾಲಿ ಇರುವ ಕಡೆಗೆ ಮಾತ್ರ ವರ್ಗಾವಣೆಗೊಂಡ ಶಿಕ್ಷಕರನ್ನು ನಿಯೋಜಿಸುವ ನಿಯಮ ಸಡಿಲಿಸಿದರೆ ಸಾಕು, ಈ ಬಾರಿ ಬೇರೆ ಏನು ಮಾಡುವ ಅಗತ್ಯವೂ ಇಲ್ಲ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.