ADVERTISEMENT

ಕಯಾನಿ ಹೇಳಿಕೆ: ಪಾಕ್ ಮಾಧ್ಯಮಗಳ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST

ಇಸ್ಲಾಮಾಬಾದ್ (ಐಎಎನ್‌ಎಸ್): `ಪಾಕಿಸ್ತಾನವು ರಕ್ಷಣೆಗೆ ಮಾಡುವ ವೆಚ್ಚದಲ್ಲಿ ಕಡಿತ ಮಾಡಿ ಆ ಹಣವನ್ನು ಜನರ ಕಲ್ಯಾಣಕ್ಕೆ ಬಳಸಬೇಕು~ ಎಂಬ ಸೇನಾ ಮುಖ್ಯಸ್ಥ ಅಶ್‌ಫಕ್ ಪರ್ವೇಜ್ ಕಯಾನಿ ಹೇಳಿಕೆಯನ್ನು ಪಾಕಿಸ್ತಾನದ ಪ್ರಮುಖ ದೈನಿಕಗಳು ಶ್ಲಾಘಿಸಿವೆ.

`ಸೇನಾ ಮುಖ್ಯಸ್ಥರ ಈ ಹೇಳಿಕೆಯೊಂದಿಗೆ ಭಾರತದೊಂದಿಗಿನ ಶಾಂತಿಯ ಸಾಧ್ಯತೆಗಳ ಹೊಸ ಬಾಗಿಲು ತೆರೆದಂತಾಗಿದೆ~ ಎಂದು ಮಾಧ್ಯಮಗಳು ಬಣ್ಣಿಸಿವೆ.

`ನಮ್ಮ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸೇನಾ ಮುಖ್ಯಸ್ಥರೊಬ್ಬರು ಪ್ರಾಯೋಗಿಕವಾದ ಹಾಗೂ ರಕ್ಷಣಾ ವೆಚ್ಚ ಕಡಿತಗೊಳಿಸುವ ಕುರಿತು ಮಾತನಾಡಿದ್ದಾರೆ~ ಎಂದು `ದಿನ್ಯೂಸ್ ಇಂಟರ್‌ನ್ಯಾಷನಲ್~ ಸಂಪಾದಕೀಯದಲ್ಲಿ ಹೇಳಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.