‘ಮಹಾರಾಣಿ ವಿದ್ಯಾರ್ಥಿನಿಯರ ಮಾರಾಮಾರಿ’ (ಪ್ರ.ವಾ., ಮಾರ್ಚ್ 27, ಸಚಿತ್ರ ಸುದ್ದಿ).
ಮಹಿಳಾ ದಿನವನ್ನು ಆಚರಿಸಿದ ಕೆಲವೇ ದಿನಗಳಲ್ಲಿ ಈ ಮಾರಾ‘ಮಾರಿ’ ಘಟನೆ ನಡೆದಿರುವುದು ಅರ್ಥಪೂರ್ಣ! ಮಹಿಳೆಯರು ಈಗ ಯಾವುದರಲ್ಲಿ ತಾನೆ ಹಿಂದುಳಿದಿದ್ದಾರೆ? ಜಡೆ ಹಿಡಿದು ಎಳೆದಾಡಿ ಹೊಡೆದಾಡಿಕೊಂಡರಂತೆ. ಜಡೆಗಳ ಪ್ರಯೋಜನವೂ ಇದರಿಂದ ಸಾಬೀತಾಯಿತಲ್ಲವೆ? ಜಡೆಗಳೇ ಇಲ್ಲದಿದ್ದರೆ ‘ಜಟಾ’ಪಟಿ ಹೇಗೆ ಸಾಧ್ಯ? (ಈ ವಿಷಯದಲ್ಲಿ ಪುರುಷರು ದುರ್ದೈವಿಗಳು!)
ಕೆಲವೊಮ್ಮೆ ಮಾರ (ಮನ್ಮಥ) ಕಾರಣಕ್ಕಾಗಿ ಮಾರಾಮಾರಿಗಳು ನಡೆಯುವುದುಂಟು. ಇದು ಅಂಥದೇನಲ್ಲ. ಅಂತೂ ಜಡೆಗಳಿಗೆ ಜಯವಿರಲಿ; ಜಗಳ ಚಿರಾಯುವಾಗಲಿ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.