ADVERTISEMENT

ಗುರುವಾರ, 12–9–1963

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ರಾಜ್ಯಾಂಗ ತಿದ್ದುಪಡಿಗೆ ಮೇಲ್ಮನೆ ಅನುಮೋದನೆ
ಬೆಂಗಳೂರು, ಸೆ. 11– ನಾಡಿನ ಸಮಗ್ರತೆಯನ್ನು ಪ್ರಶ್ನಿಸದಂತೆ ತಡೆಯುವ ಮತ್ತು ಪಾರ್ಲಿಮೆಂಟ್‌ ಅಥವಾ ರಾಜ್ಯ ಶಾಸನ ಸಭೆಗಳಿಗೆ ಸ್ಪರ್ಧಿಸುವವರು ನಾಡಿನ ಬಗ್ಗೆ ತಮ್ಮ ನಿಷ್ಠೆಯನ್ನು ಸೂಚಿಸುವ ಪ್ರಮಾಣ ವಚನವನ್ನು ಸ್ವೀಕರಿಸುವುದಕ್ಕೆ ಸಂಬಂಧಿಸಿದ ರಾಜ್ಯಾಂಗಕ್ಕೆ ಪಾರ್ಲಿ­ಮೆಂಟಿನ ತಿದ್ದುಪಡಿಯನ್ನು ಅನು­ಮೋದಿಸುವ ನಿರ್ಣಯವನ್ನು ಇಂದು ವಿಧಾನ ಪರಿಷತ್ತು ಅಂಗೀಕರಿಸಿತು.

ವಿಳಂಬವಿಲ್ಲದೆ ಬೊಕಾರೊ ಯೋಜನೆ ಕಾರ್ಯರೂಪಕ್ಕೆ
ನವದೆಹಲಿ, ಸೆ. 11– ಸರ್ಕಾರಿ ಕ್ಷೇತ್ರದ ಉದ್ಯಮವಾಗಿ ಬೊಕಾರೊ ಉಕ್ಕಿನ  ಕಾರ್ಖಾನೆ  ಸ್ಥಾಪನೆ ಕೆಲಸದಲ್ಲಿ ಸರ್ಕಾರ­ವು ಹೆಚ್ಚು ವಿಳಂಬವಿಲ್ಲದೆ ತೊಡಗು­ವು­ದೆಂದು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಶ್ರೀ ಸಿ. ಸುಬ್ರಹ್ಮಣ್ಯಂ ಇಂದು ಲೋಕಸಭೆಯಲ್ಲಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.