ADVERTISEMENT

ಬುಧವಾರ, 7-9-1961

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

27 ಪ್ರಮಾಣಿತ ಎಕರೆ ಪರಿಮಿತಿಗೆ ಕಾಂಗ್ರೆಸ್ ಪಕ್ಷದ ಒಪ್ಪಿಗೆ
ಬೆಂಗಳೂರು, ಸೆ. 6 - ಭೂ ಹಿಡುವಳಿ ಪರಿಮಿತಿ 27 ಎಕರೆಗಳಿರಬೇಕೆಂದು ಸೆಲೆಕ್ಟ್ ಸಮಿತಿ ಮಾಡಿರುವ ಶಿಫಾರಸನ್ನು ಇಂದು ವಿಧಾನ ಮಂಡಲದ ಕಾಂಗ್ರೆಸ್ ಪಕ್ಷ ಅಂಗೀಕರಿಸಿತು. ಮುಂದೆ ಜಮೀನನ್ನು ಸ್ವಾಧೀನಕ್ಕೆ  ಪರಿಮಿತಿ 18 ಎಕರೆಗಳಿರಬೇಕೆಂದು ತೀರ್ಮಾನ ಕೈಗೊಂಡಿದೆ.

ಮಾಸ್ಟರ್ ತಾರಾಸಿಂಗರ ಸ್ಥಿತಿ ಮತ್ತೂ ಕಳವಳ
ಅಮೃತಸರ, ಸೆ. 6 - ಉಪವಾಸದ 23ನೇ ದಿನವಾದ ಇಂದು ಮಾಸ್ಟರ್ ತಾರಾಸಿಂಗ್‌ರ ಕಳವಳಕರ ಪರಿಸ್ಥಿತಿ ಮತ್ತಷ್ಟು ಕಳವಳಕಾರಿಯಾಗಿದೆಯೆಂದು ವೈದ್ಯರ ಪ್ರಕಟಣೆ ತಿಳಿಸಿದೆ.

ಅವರ ದೌರ್ಬಲ್ಯ ಇಂದು ಇನ್ನೂ ಹೆಚ್ಚಿದೆ. ಕಳೆದ ರಾತ್ರಿ ಕೊಂಚ ಕೊಂಚವಾಗಿ ಒಟ್ಟು 2 ಗಂಟೆ ಕಾಲ ಮಾತ್ರ ನಿದ್ರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.